ಇಂದೋರ್​ನಲ್ಲಿ 25ಕ್ಕೂ ಹೆಚ್ಚು ಜನ ದೇವಸ್ಥಾನದ ಬಳಿ ಬಾವಿಗೆ ಬಿದ್ದ ಪ್ರಕರಣ; 8 ಜನ ಮೃತ…

ಇಂದೋರ್: ಇಂದು ಬೆಳಿಗ್ಗೆ ಇಂದೋರ್ ದೇವಸ್ಥಾನದಲ್ಲಿ 30 ಕ್ಕೂ ಹೆಚ್ಚು ಜನರು ಮೆಟ್ಟಿಲು ಬಾವಿಗೆ ಬಿದ್ದಿದ್ದರು. ಈ ಪ್ರಕರಣದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು ಅವರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ರಾಮನವಮಿ ಸಂದರ್ಭದಲ್ಲಿ ಭಾರೀ ಜನಸಂದಣಿಯಿಂದಾಗಿ ದೇಗುಲದ ಬಾವಿಯ ಮೇಲ್ಛಾವಣಿ ಕುಸಿದಿದೆ. ಸದ್ಯ ಹದಿನೇಳು ಜನರನ್ನು ರಕ್ಷಿಸಲಾಗಿದ್ದು, ಬೆಳೇಶ್ವರ ಮಹಾದೇವ ದೇವಸ್ಥಾನದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವುಗಳನ್ನು ಇಂದೋರ್ ಪೊಲೀಸ್ ಮುಖ್ಯಸ್ಥ ಮಕರಂದ್ ದೇವುಸ್ಕರ್ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ರಾಮನವಮಿ ದಿನ ನಡೆಯಿತು ಘೋರ ದುರಂತ; … Continue reading ಇಂದೋರ್​ನಲ್ಲಿ 25ಕ್ಕೂ ಹೆಚ್ಚು ಜನ ದೇವಸ್ಥಾನದ ಬಳಿ ಬಾವಿಗೆ ಬಿದ್ದ ಪ್ರಕರಣ; 8 ಜನ ಮೃತ…