ಹೊಸ ಮನೆ ನೋಡುವ ಮುನ್ನವೇ ಹುತಾತ್ಮನಾದ! ತಬ್ಬಲಿಯಾದ ಕಂದಮ್ಮಗಳು

ನವದೆಹಲಿ: ಯೋಧರ ಜೀವನವೇ ಹಾಗೆ. ಯಾವಾಗ, ಏನಾಗುತ್ತದೆಯೋ ಗೊತ್ತೇ ಆಗುವುದಿಲ್ಲ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಈ ಯೋಧರ ಜೀವನ ಹಾಗೂ ಅವರ ಕುಟುಂಬ ವರ್ಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಲೇ ಇರುತ್ತವೆ. ಅಂಥದ್ದೇ ಒಂದು ನೋವಿನ ಘಟನೆ ಭಾರತದ ಯೋಧ ಕೆ.ಪಳನಿ ಅವರ ಜೀವನದಲ್ಲಿಯೂ ನಡೆದುಬಿಟ್ಟಿದೆ. ಚೀನಾದಿಂದ ಭಾರತವನ್ನು ಕಾಪಾಡಲು ನಿನ್ನೆ ಹೋರಾಟ ನಡೆಸಿ ಹುತಾತ್ಮರಾದವರ ಪೈಕಿ ತಮಿಳುನಾಡಿನ ಕೆ.ಪಳನಿ ಕೂಡ ಒಬ್ಬರು. ರಾಮನಾಥಪುರ ಜಿಲ್ಲೆಯ ಕಡುಕ್ಕಲೂರು ಗ್ರಾಮದ ನಿವಾಸಿಯಾಗಿರುವ ಪಳನಿ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ … Continue reading ಹೊಸ ಮನೆ ನೋಡುವ ಮುನ್ನವೇ ಹುತಾತ್ಮನಾದ! ತಬ್ಬಲಿಯಾದ ಕಂದಮ್ಮಗಳು