ಹುಬ್ಬಳ್ಳಿ ಮಾಸ್ಟರ್​ಮೈಂಡ್​ ಅರೆಸ್ಟ್​: ತೀವ್ರ ವಿಚಾರಣೆ

ಹುಬ್ಬಳ್ಳಿ: ಕೊನೆಗೂ ಹುಬ್ಬಳ್ಳಿ ಗಲಭೆಯ ರೂವಾರಿ ಮೌಲ್ವಿ ವಾಸಿಂ ಪಠಾಣ್​ನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಸಂಜೆ ಸುಮಾರು 4ಗಂಟೆಗೆ ಬಂಧಿಸಿರುವ ಪೊಲೀಸರು ಮೌಲ್ವಿಯನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಸಿಡಿಪಿಗಳಾದ ಸಾಹಿಲ್​ ಬಾಗ್ಲಾ ಹಾಗೂ ಗೋಪಾಲ ಬ್ಯಾಕೋಡ್​ ಅವರಿಂದ ಸುಧೀರ್ಘ ವಿಚಾರಣೆ ನಡೆಸಲಾಗುತ್ತಿದೆ. ಗಲಭೆಯ ದಿನ ರಾತ್ರಿ ನಡೆದ ಘಟನೆ, ಹಾಗೂ ಅಲ್ಲಿ ಸೇರಿದ್ದ ಜನರ ಬಗ್ಗೆ ಮಾಹಿತ ಕಲೆ ಹಾಕುತ್ತಿದ್ದಾರೆ. ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.