ಕರೊನಾ ಸಂದರ್ಭದಲ್ಲಿ ತಮಿಳುನಾಡಿನ ಕಿತಾಪತಿ, ರಾಜ್ಯದ ಗಡಿಯೊಳಗೆ ನಾಕಾಬಂದಿ; ತೆರವುಗೊಳಿಸಿದ ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು: ಇಡೀ ದೇಶವೇ ಕರೊನಾ ಪಿಡುಗಿನ ವಿರುದ್ಧ ಹೋರಾಡುತ್ತಿದ್ದರೆ ತಮಿಳುನಾಡು ಮಾತ್ರ ಕರ್ನಾಟಕದೊಂದಿಗೆ ಗಡಿ ಜಗಳ ತೆಗೆಯಲು ಹುನ್ನಾರ ನಡೆಸಿದೆ. ಅತ್ತಿಬೆಲೆಗೆ ಹೊಂದಿಕೊಂಡಂತಿರುವ ಗಡಿಯಲ್ಲಿ ತಮಿಳುನಾಡು ಪೊಲೀಸರು ಉದ್ದೇಶಪೂರ್ವಕವಾಗಿ ನಾಕಾಬಂದಿ ಏರ್ಪಡಿಸಿ ಲಾಕ್​ಡೌನ್​ ಹಿನ್ನೆಲೆಯಲ್ಲಿ ವಾಹನಗಳ ಬಳಕೆಯನ್ನು ತಡೆಯಲು ಯತ್ನಿಸುವ ಮೂಲಕ ಗಡಿ ಕ್ಯಾತೆಗೆ ಕಿಚ್ಚುಹೊತ್ತಿಸಿದ್ದರು. ಗುರುವಾರ ಬೆಳಗ್ಗೆ ಅತ್ತಿಬೆಲೆಗೆ ಭೇಟಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗಡಿಭಾಗದಲ್ಲಿ ಲಾಕ್​ಡೌನ್​ ಅನುಷ್ಠಾನದಲ್ಲಿ ಕರ್ನಾಟಕ ಪೊಲೀಸರು ಕೈಗೊಂಡಿರುವ ಕ್ರಮಗಳ ಪರಿಶೀಲನೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ತಮಿಳುನಾಡು ಪೊಲೀಸರು … Continue reading ಕರೊನಾ ಸಂದರ್ಭದಲ್ಲಿ ತಮಿಳುನಾಡಿನ ಕಿತಾಪತಿ, ರಾಜ್ಯದ ಗಡಿಯೊಳಗೆ ನಾಕಾಬಂದಿ; ತೆರವುಗೊಳಿಸಿದ ಗೃಹ ಸಚಿವ ಬೊಮ್ಮಾಯಿ