ಪ್ರದರ್ಶನ ಕಲೆಗಳು ಆತ್ಮ ಸಾಕ್ಷಾತ್ಕಾರಕ್ಕೆ ಪೂರಕ ; ಪಂಡಿತ್ ಮುದ್ದುಮೋಹನ್ ಅಭಿಮತ

ಬೆಂಗಳೂರು: ಯಾವುದೇ ಪ್ರದರ್ಶನಗಳು ಪ್ರೇಕ್ಷಕರಿಗೆ ಆನಂದವನ್ನು ಕೊಡುವುದರ ಜೊತೆಗೆ ಕಲಾವಿದನ ಆತ್ಮ ಸಾಕ್ಷಾತ್ಕಾರಕ್ಕೂ ಪೂರಕವಾಗಿರುತ್ತವೆ ಎಂದು ಹಿಂದೂಸ್ತಾನಿ ಗಾಯಕ ಪಂಡಿತ್ ಮುದ್ದುಮೋಹನ್ ಅಭಿಪ್ರಾಯಿಸಿದ್ದಾರೆ. ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ಶ್ರೀಗುರು ಸಮರ್ಥ ಸಂಗೀತ ವಿದ್ಯಾಲಯವು ಹಮ್ಮಿಕೊಂಡಿದ್ದ ಹಿಂದೂಸ್ತಾನಿ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಾ ಪ್ರಕಾರಗಳಲ್ಲಿಯೇ ಸಂಗೀತ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಸಂಗೀತವು ಹೇಳುವ, ಕೇಳುವ, ನೋಡುವ ಎಲ್ಲರಿಗೂ ಏಕಕಾಲದಲ್ಲಿ ಆನಂದವನ್ನು ನೀಡುತ್ತದೆ. ಪ್ರೇಕ್ಷಕರಿಗೆ ಆನಂದ ನೀಡಿದರೆ; ಕಲಾವಿದನಿಗೆ ಆತ್ಮಸಾಕ್ಷಾತ್ಕಾರ ಮೂಡಿಸುತ್ತದೆ. ಸಂಗೀತಕ್ಕೆ ಬೇರೆಲ್ಲ ಕಲೆಗಳಿಗಿಂತ ಬೇಗ … Continue reading ಪ್ರದರ್ಶನ ಕಲೆಗಳು ಆತ್ಮ ಸಾಕ್ಷಾತ್ಕಾರಕ್ಕೆ ಪೂರಕ ; ಪಂಡಿತ್ ಮುದ್ದುಮೋಹನ್ ಅಭಿಮತ