ಹೆದ್ದಾರಿ ಸಮೀಕ್ಷೆ ಅಂತಿಮ

ಮನೋಹರ್ ಬಳಂಜ ಬೆಳ್ತಂಗಡಿ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಎರಡನೇ ಹಂತದ ಕಾಮಗಾರಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ನಡೆಯುತ್ತಿದೆ. ಈಗಾಗಲೇ ಸರ್ಕಾರಿ ಹಾಗೂ ಕಂದಾಯ ಜಾಗಗಳಲ್ಲಿ ರಸ್ತೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ. ರಸ್ತೆಗಾಗಿ ಇನ್ನೂ ಹಲವು ಖಾಸಗಿ ಕಟ್ಟಡಗಳು ತೆರವುಗೊಳ್ಳಬೇಕಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಅವುಗಳ ಅಂತಿಮ ಹಂತದ ಸಮೀಕ್ಷೆ ನಡೆಸುತ್ತಿದ್ದಾರೆ. ಪುಂಜಾಲಕಟ್ಟೆ, ಮದ್ದಡ್ಕ, ಕುವೆಟ್ಟು, ಗುರುವಾಯನಕೆರೆ, ಬೆಳ್ತಂಗಡಿ, ಮುಂಡಾಜೆ, ಚಿಬಿದ್ರೆ, ಚಾರ್ಮಾಡಿ ಮೊದಲಾದ ಗ್ರಾಮಗಳಲ್ಲಿ ಸಮೀಕ್ಷೆ ಪೂರ್ಣಗೊಂಡು ತೆರವುಗೊಳ್ಳಬೇಕಾದ ಕಟ್ಟಡಗಳನ್ನು ಗುರುತಿಸಲಾಗಿದೆ. ಲಾಲ, ಉಜಿರೆ ಭಾಗದಲ್ಲಿ ಸಮೀಕ್ಷೆ … Continue reading ಹೆದ್ದಾರಿ ಸಮೀಕ್ಷೆ ಅಂತಿಮ