ಇಲ್ಲಿ ಗಣೇಶನಿಗೆ ಇಲಿಗಳೇ ಅರ್ಪಣೆ; ಬೆಳೆ ರಕ್ಷಣೆಗಾಗಿ ಹೀಗೊಂದು ವಿಚಿತ್ರ ಮೊರೆ..!

ಚಿಕ್ಕಮಗಳೂರು: ಇಂದು ಗಣೇಶ ಚತುರ್ಥಿ, ವಿಧವಿಧದ ಗಣಪತಿಯನ್ನು ಕೂರಿಸಿ, ಬಗೆಬಗೆಯ ಭಕ್ಷ್ಯಭೋಜನಗಳನ್ನು ತಯಾರಿಸಿ, ನೈವೇದ್ಯವಿಟ್ಟು ಭಕ್ತರು ಗಣೇಶನನ್ನು ಪೂಜಿಸುತ್ತಾರೆ. ಆದರೆ ಇಲ್ಲೊಂದು ಕಡೆ ಗಣೇಶನಿಗೆ ಆತನ ವಾಹನವಾದ ಇಲಿಗಳನ್ನೇ ಭಕ್ತರು ಅರ್ಪಿಸಿದ್ದಾರೆ! ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮರ್ಕಲ್‌ ಗ್ರಾಮದಲ್ಲಿ ಹೀಗೆ ವಿಚಿತ್ರ ರೀತಿಯಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗಿದೆ. ಅಷ್ಟಕ್ಕೂ ಅವರು  ಹೀಗೆ ಇಲಿಗಳನ್ನು ತಂದು ಗಣೇಶನಿಗೆ ಅರ್ಪಿಸಲಿಕ್ಕೂ ಬಲವಾದ ಕಾರಣವಿದೆ. ಇಲ್ಲಿ ಚೌತಿ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ಗಣೇಶನ ಮುಂದೆ ನಿತಿನ್‌ ಎಂಬ ಭಕ್ತರೊಬ್ಬರು ತನ್ನ ಸ್ನೇಹಿತನ … Continue reading ಇಲ್ಲಿ ಗಣೇಶನಿಗೆ ಇಲಿಗಳೇ ಅರ್ಪಣೆ; ಬೆಳೆ ರಕ್ಷಣೆಗಾಗಿ ಹೀಗೊಂದು ವಿಚಿತ್ರ ಮೊರೆ..!