ರಾಷ್ಟ್ರ ರಾಜಧಾನಿಯಲ್ಲಿ ತಂಪೆರೆದ ವರುಣ: ದೆಹಲಿಯ ಹಲವೆಡೆ ಭಾರೀ ಮಳೆ, ವಿಮಾನ ಸಂಚಾರ ವಿಳಂಬ

ನವದೆಹಲಿ: ಭಾರೀ ತಾಪಮಾನದಿಂದಾಗಿ ಸುಡುಬಿಸಿಲಿನಿಂದ ರೋಸಿಹೋಗಿದ್ದ ರಾಷ್ಟ್ರ ರಾಜಧಾನಿ ಜನರಿಗೆ ಗುರುವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಸ್ವಲ್ಪ ನಿರಾಳವಾಗಿದ್ದಾರೆ. ಶೇ.40ಕ್ಕೂ ಅಧಿಕ ತಾಪಮಾನದಿಂದ ಜನರು ಸಾಕಾಗಿಹೋಗಿದ್ದರು. ಸದ್ಯ ಬೆಳ್ಳಂಬೆಳಗ್ಗೆ ಸುರಿದ ಮಳೆಯಿಂದಾಗಿ, ಈಗ ಸಹಜ ತಾಪಮಾನ ದಾಖಲಾಗಿದೆ. ಈ ಬಾರಿ ಮಾನ್ಸೂನ್​ ಪ್ರವೇಶ ವಿಳಂಬದಿಂದಾಗಿ ತಾಪಮಾನ ಹೆಚ್ಚಾಗಲು ಕಾರಣವಾಗಿತ್ತು. ಪೂರ್ವ ದೆಹಲಿಯ ಕೈಲಾಶ್​, ಬುರಾರಿ, ಪತಪರ್​ಗಂಜ್​, ಇಂಡಿಯಾಗೇಟ್​, ದಿಲ್ಲಿ-ನೋಯ್ಡಾ ಮತ್ತು ದಿಲ್ಲಿ-ಗುರ್​ಗಾಂವ್​ ರಸ್ತೆಯ ತುಂಬೆಲ್ಲಾ ಮಳೆ ನೀರು ನಿಂತಿದ್ದು, ವಾಹನ ಸವಾರರ ಸಂಚಾರಕ್ಕೆ ಸ್ವಲ್ಪ ಮಟ್ಟಿನ ತೊಂದರೆಯಾಯಿತು. … Continue reading ರಾಷ್ಟ್ರ ರಾಜಧಾನಿಯಲ್ಲಿ ತಂಪೆರೆದ ವರುಣ: ದೆಹಲಿಯ ಹಲವೆಡೆ ಭಾರೀ ಮಳೆ, ವಿಮಾನ ಸಂಚಾರ ವಿಳಂಬ