ಉತ್ತರಾಖಂಡದಲ್ಲಿ ಮತ್ತೆ ಹಿಮ ಯಮ: ಹಿಮಪರ್ವತ ಕುಸಿದು ಒಡೆದ ಡ್ಯಾಂ, ಹೆಚ್ಚಿದ ಪ್ರವಾಹ ಭೀತಿ

ಚಮೋಲಿ (ಉತ್ತರಾಖಂಡ): ಇಲ್ಲಿನ ತಪೋವನ ಏರಿಯಾದಲ್ಲಿ ಹಿಮಪರ್ವತ ಕುಸಿದು ಡ್ಯಾಂ ಒಡೆದ ಪರಿಣಾಮ ಚಮೋಲಿ ಜಿಲ್ಲೆಯ ಜೋಶಿ ಮಠ ಬಳಿಯಿರುವ ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ನದಿ ಪಾತ್ರ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಪ್ರವಾಹದಿಂದ ರಿಷಿಗಂಗಾ ವಿದ್ಯುತ್​ ಯೋಜನೆಗೂ ಹಾನಿಯಾಗಿದೆ. ನೂರಾರು ಇಂಡೋ-ಟಿಬೆಟನ್​ ಬಾರ್ಡರ್​ ಪೊಲೀಸ್​ (ಐಟಿಬಿಪಿ) ಘಟನಾ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಅಲಕಾನಂದ ನದಿ ಪಾತ್ರದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ನಡೆಯುತ್ತಿದೆ. ಅನೇಕ ಮುನ್ನೆಚ್ಛರಿಕಾ ಕ್ರಮವಾಗಿ … Continue reading ಉತ್ತರಾಖಂಡದಲ್ಲಿ ಮತ್ತೆ ಹಿಮ ಯಮ: ಹಿಮಪರ್ವತ ಕುಸಿದು ಒಡೆದ ಡ್ಯಾಂ, ಹೆಚ್ಚಿದ ಪ್ರವಾಹ ಭೀತಿ