ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ!

ಗಾಂಧಿನಗರ: ದೇಶಾದ್ಯಂತ ಕರೊನಾ ಹಾವಳಿ ಕೈಮೀರಿ ಹೋಗಿದ್ದು, ಸೋಂಕಿನ ಪ್ರಕರಣಗಳಷ್ಟೇ ಅಲ್ಲದೆ ಕರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಸೋಂಕಿಗೆ ಒಳಗಾಗಿ ಉಸಿರಾಟದ ತೀವ್ರ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಸಮಯದಲ್ಲಿ ಬೆಡ್​-ಆಕ್ಸಿಜನ್​ ಸಿಗದಿರುವುದು ಒಂದೆಡೆಯಾದರೆ, ಇನ್ನು ಕರೊನಾದಿಂದಾಗಿ ಸತ್ತವರ ದೇಹಗಳನ್ನು ಸುಡಲೂ ಜಾಗವಿಲ್ಲದಂತಾಗಿದೆ. ಹೀಗೆ ಶವಸಂಸ್ಕಾರಕ್ಕೆ ಜಾಗದ ಕೊರತೆಯಿಂದಾಗಿ ಇಲ್ಲೊಂದು ಕಡೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ ಮಾಡುವಂತಾಗಿದೆ. ಕಸ ಹಾಕುವ ಜಾಗದಲ್ಲೇ ಚಿತೆಗಳನ್ನು ಹಾಕಿ ಶವಸಂಸ್ಕಾರ ನಡೆಸಲಾಗುತ್ತಿದೆ. ಗುಜರಾತ್​ನ ಗಾಂಧಿನಗರದ ನಗರ ಪಾಲಿಕೆಗೆ ಸೇರಿರುವ, ಸಬರಮತಿ ನದಿ … Continue reading ಕಸ ಹಾಕುವ ಜಾಗವೇ ಮಸಣ; ಹೆಣ ಸುಡಲು ಸ್ಥಳವಿಲ್ಲದೆ ತಿಪ್ಪೆಗುಂಡಿಯಲ್ಲೇ ಅಂತ್ಯಸಂಸ್ಕಾರ!