ಕಾವೇರಿ ನಿಯಂತ್ರಣ ಮಂಡಳಿ ಶಿಫಾರಸಿಗೆ ದೇವೇಗೌಡರ ಅಸಮಾಧಾನ

ಬೆಂಗಳೂರು : ಕಾವೇರಿ ನಿಯಂತ್ರಣ ಮಂಡಳಿಯು ತಮಿಳುನಾಡಿಗೆ ಫೆಬ್ರವರಿವರೆಗೆ 1182 ಕ್ಯೂಸೆಕ್ ನೀರು ಹರಿಸುವಂತೆ ಮಾಡಿರುವ ಶಿಫಾರಸಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಂಗಾರು ಕೊರತೆಯಿಂದ ಕರ್ನಾಟಕವು ತೀವ್ರ ಬರಗಾಲವನ್ನು ಎದುರಿಸುತ್ತಿರುವ ವಿಷಮ ಪರಿಸ್ಥಿತಿಯಲ್ಲಿ, ಕಾವೇರಿ ನಿಯಂತ್ರಣ ಮಂಡಳಿಯು ಮುಂದಿನ ಫೆಬ್ರವರಿವರೆಗೆ ಪ್ರತಿದಿನ ನೀರು ಹರಿಸುವಂತೆ ಶಿಾರಸು ಮಾಡಿರುವುದು ದೊಡ್ಡ ಅನ್ಯಾಯ. ಅಷ್ಟಕ್ಕೂ ಮಂಡಳಿಯ ತೀರ್ಪಿನಂತೆ ನೀರು ಹರಿಸುವುದಕ್ಕೆ ಜಲಾಶಯಗಳಲ್ಲಿ ನೀರಿಲ್ಲ. … Continue reading ಕಾವೇರಿ ನಿಯಂತ್ರಣ ಮಂಡಳಿ ಶಿಫಾರಸಿಗೆ ದೇವೇಗೌಡರ ಅಸಮಾಧಾನ