ನೂತನ ಕೆಪಿಸಿಸಿ‌ ಕಾರ್ಯಾಧ್ಯಕ್ಷರಾಗಿ ಬಿ.ಎನ್. ಚಂದ್ರಪ್ಪ ನೇಮಕ

ಬೆಂಗಳೂರು: ದಿವಂಗತ ಆರ್​. ಧ್ರುವನಾರಾಯಣ್ ನಿಧನದಿಂದ ತೆರವಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದರಾದ ಬಿ.ಎನ್​. ಚಂದ್ರಪ್ಪ ಅವರನ್ನು ಎಐಸಿಸಿ​ ನೇಮಿಸಿದೆ. ಕಾಂಗ್ರೆಸ್​ನಿಂದ ಬಿ.ಎನ್​. ಚಂದ್ರಪ್ಪ ಅವರಿಗೆ ನೂತನ ಜವಬ್ದಾರಿಯನ್ನು ನೀಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ದಲಿತ (ಎಡಗೈ) ನಾಯಕ ಬಿ.ಎನ್ ಚಂದ್ರಪ್ಪ ಅವರನ್ನು ನೇಮಕ ಮಾಡಲಾಗಿದೆ. ಎಸ್ಸಿ ಲೆಫ್ಟ್​ಗೆ ಕೆಪಿಸಿಸಿ ವರ್ಕಿಂಗ್ ಪ್ರೆಸಿಡೆಂಟ್ ಸ್ಥಾನ ನೀಡಬೇಕು ಎಂದು ಈ ಹಿಂದೆ ಎಡಗೈ ನಾಯಕರು ಒತ್ತಾಯ ಮಾಡಿದ್ದರು. ಇದೀಗ ಎಡಗೈ ನಾಯಕರ ಬೇಡಿಕೆಯನ್ನು ಕಾಂಗ್ರೆಸ್​ ಹೈಕಮಾಂಡ್​ ಈಡೇರಿಸಿದೆ. … Continue reading ನೂತನ ಕೆಪಿಸಿಸಿ‌ ಕಾರ್ಯಾಧ್ಯಕ್ಷರಾಗಿ ಬಿ.ಎನ್. ಚಂದ್ರಪ್ಪ ನೇಮಕ