ಊಟದ ವಿಚಾರಕ್ಕೆ ಜಗಳ: ರಾಮನಗರದಲ್ಲಿ ತಾಯಿ-ಮಗ ದುರಂತ ಅಂತ್ಯ

ರಾಮನಗರ: ಊಟದ ವಿಚಾರಕ್ಕೆ ಶುರುವಾದ ಜಗಳ ತಾಯಿ-ಮಗನ ಸಾವಲ್ಲಿ ಅಂತ್ಯ ಕಂಡ ಘಟನೆ ರಾಮನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಸಂಭವಿಸಿದೆ. ವಿಜಯಲಕ್ಷ್ಮಿ(45) ಮತ್ತು ಇವರ ಪುತ್ರ ಹರ್ಷ (24) ಮೃತ ದುರ್ದೈವಿಗಳು. ವಿಜಯಲಕ್ಷ್ಮಿ ಕುಟುಂಬ ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿತ್ತು. ನಿನ್ನೆ(ಶುಕ್ರವಾರ) ತಡರಾತ್ರಿ ಊಟ ಹಾಕಿಕೊಡುವ ವಿಚಾರಕ್ಕೆ ತಾಯಿ-ಮಗ ನಡುವೆ ಶರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಗಲಾಟೆಯಿಂದ ಬೇಸತ್ತ ತಾಯಿ ಮನೆ ಮುಂದಿನ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾರೆ. ತಾಯಿಯ ಸಾವಿಂದ ಕಂಗೆಟ್ಟ ಮಗ ನೇಣು ಬಿಗಿದುಕೊಂಡು … Continue reading ಊಟದ ವಿಚಾರಕ್ಕೆ ಜಗಳ: ರಾಮನಗರದಲ್ಲಿ ತಾಯಿ-ಮಗ ದುರಂತ ಅಂತ್ಯ