ಎರಡು ಕೋಮುಗಳ ನಡುವೆ ಸಂಘರ್ಷ; ಅರ್ಧಕ್ಕೇ ನಿಂತಿತು ಉತ್ಸವದ ತೇರು!

ರಾಮನಗರ: ಹಿಜಾಬ್​-ಕೇಸರಿ ಸಂಘರ್ಷಕ್ಕೆ ಕಾಲೇಜು ತರಗತಿಗಳೇ ನಿಂತು ಹೋಗಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ. ಇದೀಗ ಮತ್ತೊಂದು ಸಂಘರ್ಷಕ್ಕೆ ದೇವಸ್ಥಾನದ ತೇರೇ ನಿಂತು ಹೋಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಇಂಥದ್ದೊಂದು ಘಟನೆ ಸಂಭವಿಸಿದೆ. ಚನ್ನಪಟ್ಟಣದ ಗುಡಿಸರಗೂರು ಗ್ರಾಮದ ಬಸವೇಶ್ವರ ಕೊಂಡ ಮಹೋತ್ಸವದಲ್ಲಿ ಉಂಟಾದ ಸವರ್ಣೀಯರು-ದಲಿತರ ನಡುವಿನ ಸಂಘರ್ಷ, ತೇರು ನಿಂತುಹೋಗುವ ಮಟ್ಟಕ್ಕೆ ತಲುಪಿದೆ. ದಲಿತರಿಗೆ ಪೂಜೆ ಸಲ್ಲಿಸಲು ನಿರಾಕರಿಸಿದ್ದರಿಂದ ಉಂಟಾದ ಸಂಘರ್ಷದಿಂದ ಬಸವೇಶ್ವರ ತೇರು ಅರ್ಧಕ್ಕೇ ನಿಂತಿದೆ. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ಕೋಮಿನವರೊಂದಿಗೆ ಶಾಂತಿ ಸಭೆ ನಡೆಸುವಲ್ಲಿ ತಹಶೀಲ್ದಾರ್ … Continue reading ಎರಡು ಕೋಮುಗಳ ನಡುವೆ ಸಂಘರ್ಷ; ಅರ್ಧಕ್ಕೇ ನಿಂತಿತು ಉತ್ಸವದ ತೇರು!