ಪ್ರವಾಹವಿದ್ದರೂ ಜಾತ್ರೆ ಬಿಡದ ಜನರು! ನಡು ನೀರಲ್ಲೇ ನಿಂತು ಪ್ರಸಾದ ಸೇವನೆ!

ಬಾಗಲಕೋಟೆ: ಕರ್ನಾಟಕದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹ ಬಂದು ಊರಲೆಲ್ಲಾ ನೀರು ನಿಂತಿದ್ದರೂ ಹೆದರದ ಜನರು ಊರಿನ ದೇವರ ಜಾತ್ರೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಘಟಪ್ರಭಾ ನದಿ ಅಬ್ಬರ ಹೆಚ್ಚಾಗಿದ್ದು, ಢವಳೇಶ್ವರ ಗ್ರಾಮದ ಹಲವು ಭಾಗ ಜಲಾವೃತವಾಗಿದೆ. ಜಲಾವೃತಗೊಂಡಿರುವ ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಊರಿನಲ್ಲಿ ಪ್ರವಾಹ ಭೀತಿ ಹೆಚ್ಚಿರುವ ಈ ಸಮಯದಲ್ಲಿ ಗ್ರಾಮಸ್ಥರೆಲ್ಲ ಸೇರಿಕೊಂಡು ಜಾತ್ರೆ ಮಾಡಿದ್ದಾರೆ. … Continue reading ಪ್ರವಾಹವಿದ್ದರೂ ಜಾತ್ರೆ ಬಿಡದ ಜನರು! ನಡು ನೀರಲ್ಲೇ ನಿಂತು ಪ್ರಸಾದ ಸೇವನೆ!