ಮುರೂರು, ದೇವರಗುಂಡದಲ್ಲಿ ಆನೆಗಳ ಉಪಟಳ

ಸುಳ್ಯ: ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಆನೆಗಳ ಉಪಟಳ ಮತ್ತೆ ತೀವ್ರಗೊಂಡಿದ್ದು ಬುಧವಾರ ರಾತ್ರಿ ಮುರೂರು ದೇವರಗುಂಡ ಭಾಗದಲ್ಲಿ ಕೃಷಿ ತೋಟಕ್ಕೆ ನುಗ್ಗಿ ಕೃಷಿ ಬೆಳೆಗಳನ್ನು ನಾಶಗೊಳಿಸಿವೆ. ದೇವರಗುಂಡ ಡಿ.ಸಿ ಬಾಲಚಂದ್ರ ಅವರ ತೋಟಕ್ಕೆ ನುಗ್ಗಿದ ಆನೆಗಳು ನೂರಕ್ಕೂ ಅಧಿಕ ಅಡಕೆ ಹಾಗೂ ಬಾಳೆಗಿಡಗಳನ್ನು ಧ್ವಂಸಗೈದಿವೆ. ಕೆಲವು ತೆಂಗಿನ ಮರಗಳಿಗೂ ಹಾನಿ ಮಾಡಿವೆ. ಹಿಂಡಾನೆಗಳು ಬೆಳೆಗಳನ್ನು ನಾಶಗೊಳಿಸುವ ವೇಳೆ ನೀರಿಗಾಗಿ ಅಳವಡಿಸಲಾಗಿದ್ದ ಪೈಪ್‌ಗಳಿಗೂ ಹಾನಿ ಉಂಟಾಗಿದೆ. ಮತ್ತೊಂದು ಗುಂಪಿನ ಆನೆ ಮಂಡೆಕೋಲು ಬೈಲು ಸಮೀಪದ ಎರ್ಕಲ್ಪಾಡಿ ಭಾಗದ ತೋಟಗಳಿಗೂ … Continue reading ಮುರೂರು, ದೇವರಗುಂಡದಲ್ಲಿ ಆನೆಗಳ ಉಪಟಳ