50 ಪ್ರಯಾಣಿಕರಿದ್ದ ಬಸ್​ ಮೇಲೆಯೇ ಬಿತ್ತು ವಿದ್ಯುತ್​ ತಂತಿ!

ಚಿಕ್ಕಮಗಳೂರು: ರಾಜ್ಯಾದ್ಯಂತ ಭಾರಿ ಮಳೆ ಸುರಿಯಲಾರಂಭಿಸಿದ ಬಳಿಕ ಆಗುತ್ತಿರುವ ಅವಾಂತರಗಳು ಒಂದೆರಡಲ್ಲ. ರಸ್ತೆಯ್ಲಲಿ ವಾಹನ ಸವಾರ ಪರದಾಡುತ್ತಿರುವುದು, ಮನೆಗೆ ನೀರು ನುಗ್ಗಿ ಜನಸಾಮಾನ್ಯರು ಸಂಕಟ ಪಡುತ್ತಿರುವುದು, ಒಟ್ಟಾರೆಯಾಗಿ ಜನಜೀವನ ಅಸ್ತವ್ಯಸ್ತ ಆಗಿರುವುದರ ಜತೆಗೆ ಇತರ ತೊಂದರೆಗಳು ಕಾಡಲಾರಂಭಿಸಿವೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಒಮ್ಮೆಗೆ ಒಂದಿಡೀ ಬಸ್​ನ ಜನರು ಹಾಗೂ ಸಾರ್ವಜನಿಕರು ಆತಂಕಕ್ಕೆ ಒಳಗಾಗುವಂತಹ ಸನ್ನಿವೇಶವೊಂದು ಸೃಷ್ಟಿಯಾಗಿತ್ತು. ಅದೇನೆಂದರೆ ಐವತ್ತು ಪ್ರಯಾಣಿಕರಿದ್ದ ಕೆಎಸ್​ಆರ್​ಟಿಸಿ ಬಸ್​ ಮೇಲೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ … Continue reading 50 ಪ್ರಯಾಣಿಕರಿದ್ದ ಬಸ್​ ಮೇಲೆಯೇ ಬಿತ್ತು ವಿದ್ಯುತ್​ ತಂತಿ!