ಬ್ಯಾಂಕ್​ ವ್ಯವಹಾರದ ಬಗ್ಗೆ ಅನುಮಾನ; ಪಿಗ್ಮಿ ಹಣ ಹಿಂದಿರುಗಿಸುವಂತೆ ಮುಗಿಬಿದ್ದ ಖಾತೆದಾರರು

ದಾವಣಗೆರೆ: ರಾಜ್ಯದ ಕೆಲವು ಕೋ-ಆಪರೇಟಿವ್ ಬ್ಯಾಂಕ್​ಗಳಲ್ಲಿನ ಅವ್ಯವಹಾರಗಳು ಒಂದೊಂದಾಗಿ ಬೆಳಕಿಗೆ ಬಂದು, ಖಾತೆದಾರರು ಸಂಕಷ್ಟದಲ್ಲಿರುವ ಬೆನ್ನಿಗೇ ಇಲ್ಲೊಂದು ಕಡೆ ಖಾತೆದಾರರು ಆತಂಕಕ್ಕೆ ಒಳಗಾಗಿ, ಪಿಗ್ಮಿ ಕಟ್ಟಲಾಗಿದ್ದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿ ಮುಗಿಬಿದ್ದ ಪ್ರಕರಣ ವರದಿಯಾಗಿದೆ. ದಾವಣಗೆರೆ ಜಿಲ್ಲೆ ಹರಿಹರದ ಮಸೀದಿ ಕಾಂಪ್ಲೆಕ್ಸ್​​ನಲ್ಲಿರುವ ಮಿಲ್ಲತ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದ ಶಾಖೆಯಲ್ಲಿ ಖಾತೆದಾರರು ಮುಗಿಬಿದ್ದು, ಠೇವಣಿ, ಉಳಿತಾಯ ಹಾಗೂ ಪಿಗ್ಮಿ ಹಣವನ್ನು ಕೂಡ ಹಿಂದಿರುಗಿಸುವಂತೆ ಪಟ್ಟು ಹಿಡಿದರು. ಕಳೆದ ಎರಡು ವರ್ಷಗಳಿಂದ ಠೇವಣಿ, ಉಳಿತಾಯ, ಪಿಗ್ಮಿ ಹಣ ಹಿಂದಿರುಗಿಸಲು ಈ ಬ್ಯಾಂಕ್​ … Continue reading ಬ್ಯಾಂಕ್​ ವ್ಯವಹಾರದ ಬಗ್ಗೆ ಅನುಮಾನ; ಪಿಗ್ಮಿ ಹಣ ಹಿಂದಿರುಗಿಸುವಂತೆ ಮುಗಿಬಿದ್ದ ಖಾತೆದಾರರು