ಲಡಾಖ್​​ಗೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್

ನವದೆಹಲಿ: ಚೀನಾ, ಪಾಕಿಸ್ತಾನಗಳು ಗಡಿ ಭಾಗದಲ್ಲಿ ಉಂಟುಮಾಡಿರುವ ಸಂಘರ್ಷ ಪರಿಸ್ಥಿತಿ ಮತ್ತು ಆ ನಂತರದ ಬೆಳವಣಿಗೆಗಳಿಗೆ ಪೂರಕವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲಡಾಖ್​ಗೆ ಹೊರಟಿದ್ದಾರೆ. ಎರಡು ದಿನಗಳ ಪ್ರವಾಸ ಇದಾಗಿದ್ದು, ಇಂದು ಲಡಾಖ್​ನಲ್ಲಿದ್ದರೆ ನಾಳೆ ಶ್ರೀನಗರದಲ್ಲಿ ಇರಲಿದ್ದಾರೆ. ಚೀಫ್ ಆಫ್​ ಡಿಫೆನ್ಸ್ ಸ್ಟಾಫ್​ ಜನರಲ್ ಬಿಪಿನ್ ರಾವತ್​, ಸೇನಾ ಮುಖ್ಯಸ್ಥ ಜನರ ಮನೋಜ್ ಮುಕುಂದ್ ನರವಣೆ ಸಚಿವರ ಜತೆಗೆ ಪ್ರವಾಸದಲ್ಲಿದ್ದಾರೆ. ಚೀನಾ ಸೇನೆ ಎಲ್​ಎಸಿಯಲ್ಲಿ ಅತಿಕ್ರಮಿತ ಪ್ರದೇಶದಿಂದ ಹಿಂದಡಿ ಇರಿಸುವುದಾಗಿ ಒಪ್ಪಿಕೊಂಡ ಬೆನ್ನಲ್ಲೇ ನಡೆಯುತ್ತಿರುವ … Continue reading ಲಡಾಖ್​​ಗೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್