ಹೋಟೆಲ್ ಕ್ಯಾಶಿಯರ್ ಹತ್ಯೆ; ನೌಕರ ಸೆರೆ

ಬೆಂಗಳೂರು : ಪತ್ನಿಯ ಜತೆ ಅಕ್ರಮ ಸಂಬಂಧದ ಶಂಕೆ ಮೇಲೆ ಕ್ಯಾಶಿಯರ್ ಸುಭಾಷ್ (26) ಎಂಬಾತನನ್ನು ಕೊಲೆ ಮಾಡಿದ್ದ ಮುರುಗೇಶಪಾಳ್ಯದ ಸಿಟಾಡೆಲ್ ಹೋಟೆಲ್ ಸ್ವಚ್ಛತಾ ಕೆಲಸಗಾರನ್ನು ಜೆ.ಬಿ.ನಗರ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಅಭಿಷೇಕ್ ಬಂಧಿತ. ಹೋಟೆಲ್ ಆವರಣದ ಸೋಫಾದ ಮೇಲೆ ಗುರುವಾರ ನಸುಕಿನಲ್ಲಿ ಮಲಗಿದ್ದ ಕ್ಯಾಶಿಯರ್ ಸುಭಾಷ್ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಅಲ್ಲಿಂದ ತಪ್ಪಿಸಿಕೊಂಡು ಹುಟ್ಟೂರಿಗೆ ಹೋಗುತ್ತಿದ್ದಾಗ ಕೆ.ಆರ್.ಪುರ ರೈಲು ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2018ರಲ್ಲಿ … Continue reading ಹೋಟೆಲ್ ಕ್ಯಾಶಿಯರ್ ಹತ್ಯೆ; ನೌಕರ ಸೆರೆ