ಅಲ್ಲೂ ಪ್ರತಿಭಟನೆ, ಇಲ್ಲೂ ಪ್ರತಿಭಟನೆ; ನಮಗೆ ಈ ಠಾಣೆಯೇ ಬೇಡ ಎಂದ ಪೊಲೀಸರು

ಧಾರವಾಡ: ಇದೊಂಥರ ಖಾಕಿ ವರ್ಸಸ್ ಬ್ಲ್ಯಾಕ್ ಎಂಬಂಥ ಪ್ರಕರಣ. ಖಾಕಿಧಾರಿ ಪೊಲೀಸರು ಹಾಗೂ ಕರಿಕೋಟಿನ ವಕೀಲರ ನಡುವಿನ ಕಿತ್ತಾಟ ಈಗ ಒಂದಿಡೀ ಠಾಣಾ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವಂತಾಗಿದೆ. ಏಕೆಂದರೆ ಈ ಠಾಣೆಯ ಪೊಲೀಸರು ತಮಗೆ ಸಾಮೂಹಿಕ ವರ್ಗವಾಣೆ ಕೊಡಿ ಎಂಬುದಾಗಿ ಒತ್ತಾಯಿಸುತ್ತಿದ್ದಾರೆ. ಒಂದೆಡೆ ಪೊಲೀಸರ ಮೇಲೆ ಕ್ರಮಕ್ಕೆ ಆಗ್ರಹಿಸಿ ಧಾರವಾಡದಲ್ಲಿ ವಕೀಲರಿಂದ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸಾಮೂಹಿಕ ವರ್ಗಾವಣೆ ನೀಡಿ ಎಂದು ಠಾಣೆ ಬಳಿ ಪೊಲೀಸರೇ ಪ್ರತಿಭಟನೆ ನಡೆಸುತ್ತಿದ್ದಾರೆ. ವಕೀಲ ವಿನೋದ ಪಾಟೀಲ್ … Continue reading ಅಲ್ಲೂ ಪ್ರತಿಭಟನೆ, ಇಲ್ಲೂ ಪ್ರತಿಭಟನೆ; ನಮಗೆ ಈ ಠಾಣೆಯೇ ಬೇಡ ಎಂದ ಪೊಲೀಸರು