1 ದಿನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಯುವಕ ಇನ್ನಿಲ್ಲ!

ಛತ್ತೀಸ್​ಗಢ: 24 ಗಂಟೆಗಳ ಕಾಲ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಶೈಲೇಂದ್ರ ಧ್ರುವ್(18) ಗುಣಪಡಿಸಲಾಗದ ಪ್ರೊಜೆರಿಯಾ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಗರಿಯಾಬಂದ್ ಗ್ರಾಮದ ಮೆಡ್ಕಿ ದಬ್ರಿ ಗ್ರಾಮದ ನಿವಾಸಿಯಾಗಿದ್ದ ಶೈಲೇಂದ್ರನಿಗೆ ಬಾಲ್ಯದಿಂದಲೂ ಜಿಲ್ಲಾಧಿಕಾರಿ ಆಗಬೇಕೆಂಬ ಕನಸಿತ್ತು. ಗುಣಪಡಿಸಲಾಗದ ಪ್ರೊಜೆರಿಯಾ ಕಾಯಿಲೆಗೆ ತುತ್ತಾಗಿದ್ದ ಶೈಲೇಂದ್ರ ಅವರ ಕನಸು ನನಸು ಮಾಡಲೆಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು 2021ರಲ್ಲಿ ಒಂದು ದಿನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದ್ದರು. ಅಲ್ಲದೇ ತಮ್ಮ ಮನೆಗೆ ಆಹ್ವಾನಿಸಿ ಜತೆಗೆ ಕೂತು ಊಟ ಮಾಡಿದ್ದರು. ಇದನ್ನೂ ಓದಿ: ನೀವು … Continue reading 1 ದಿನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಯುವಕ ಇನ್ನಿಲ್ಲ!