ಕೆನಡಾ ಸಂಸತ್​​ನಲ್ಲಿ ಕನ್ನಡದ ಕಂಪು: ಕುವೆಂಪು ಅವರ ಗೀತೆ ಹಾಡಿದ ಸಂಸದನ ವಿಡಿಯೋ ವೈರಲ್​​

ಕೆನಡಾ: ವಿಶ್ವದಾದ್ಯಂತ ಕನ್ನಡಿಗರು ನೆಲೆಸಿದ್ದು, ಆಗ್ಗಾಗ್ಗೆ ಕನ್ನಡದ ಬಗ್ಗೆ ಹೆಮ್ಮೆ ತರಿಸುವಂತಹ ಕಾರ್ಯವನ್ನು ಮಾಡುತ್ತಿರುತ್ತಾರೆ. ಕನ್ನಡದ ಕಂಪು ಎಲ್ಲೆಲ್ಲೂ ಪಸರಿಸಿದ್ದು, ವಿದೇಶದಲ್ಲಿ ನೆಲೆಸಿದ್ದರು ಮಾತೃಭಾಷೆಯ ಮೇಲಿನ ಅಭಿಮಾನವನ್ನು ಬಿಡುವುದಿಲ್ಲ. ಕನ್ನಡಾಭಿಮಾನ ತೋರಿಸುವ ಹೀಗೊಂದು ಸನ್ನಿವೇಶವನ್ನು ಸದ್ಬಳಕೆ ಮಾಡಿಕೊಂಡಿರುವ ಕೆನಡಾದ ಸಂಸದ ಚಂದ್ರ ಆರ್ಯ ಅವರು ಸಂಸತ್​ನಲ್ಲಿ ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರೂ ಇರು.. ಎಂತಾದರೂ ಇರು…ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಗೀತೆಯನ್ನು ಹೇಳಿದ್ದಾರೆ. ಸಂಸತ್​ನಲ್ಲಿ ಮಾತನಾಡಲು ಆರಂಭಿಸಿದ ಅವರು, ನಾನು ನನ್ನ ಮಾತೃ ಭಾಷೆ ಕನ್ನಡದಲ್ಲಿ ಮಾತನಾಡಿದ … Continue reading ಕೆನಡಾ ಸಂಸತ್​​ನಲ್ಲಿ ಕನ್ನಡದ ಕಂಪು: ಕುವೆಂಪು ಅವರ ಗೀತೆ ಹಾಡಿದ ಸಂಸದನ ವಿಡಿಯೋ ವೈರಲ್​​