ಸಂಜೆಯಾದರೆ ಬಸ್ ಅಲಭ್ಯ

ವಿಜಯವಾಣಿ ಸುದ್ದಿಜಾಲ ಕಡಬ ಸಂಜೆ 5.30ರ ಬಳಿಕ ಕುಕ್ಕೆ ಸುಬ್ರಹ್ಮಣ್ಯದಿಂದ ಕಡಬ ರಸ್ತೆಯಾಗಿ ಉಪ್ಪಿನಂಗಡಿ ಕಡೆಗೆ ಸಂಚರಿಸುವವರಿಗೆ ಕೆಎಸ್ಸಾರ್ಟಿಸಿ ಬಸ್ ಸೇವೆ ಲಭ್ಯವಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಸುಬ್ರಹ್ಮಣ್ಯ- ಕಡಬ-ಉಪ್ಪಿನಂಗಡಿ ನಡುವೆ ಪ್ರಸ್ತುತ ಸಂಜೆ ವೇಳೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಿಂದ ಕಡಬ ಮೂಲಕ ಉಪ್ಪಿನಂಗಡಿ ಕಡೆಗೆ ಸಂಜೆ 5.30ಕ್ಕೆ ಕೊನೆಯ ಬಸ್ ಸಂಚರಿಸುತ್ತದೆ. ಬಳಿಕ ಸುಬ್ರಹ್ಮಣ್ಯದಿಂದ ಕಡಬ, ಉಪ್ಪಿನಂಗಡಿ ಭಾಗಕ್ಕೆ ಯಾವುದೇ ಕೆಎಸ್ಸಾರ್ಟಿಸಿ ಬಸ್ ಸಂಚಾರ ವ್ಯವಸ್ಥೆ ಇಲ್ಲ. ಪ್ರಯಾಣಿಕರಿಗೆ ತೊಂದರೆ … Continue reading ಸಂಜೆಯಾದರೆ ಬಸ್ ಅಲಭ್ಯ