ಪ್ರವಾಹದಲ್ಲಿ ಸಿಲುಕಿ ಬಸ್​ ಪಲ್ಟಿ; ಕ್ರೇನ್​ ಮೂಲಕ ರಕ್ಷಣೆ

ಅಮೃತಸರ: ಉತ್ತರ ಭಾರತದ ಹಲವು ಭಾಗಗಳಲ್ಲಿ ವರುಣ ಕಳೆದ ಕೆಲವು ದಿನಗಳಿಂದ ಆರ್ಭಟಿಸುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದೀಗ ಘಟನೆಯೊಂದರಲ್ಲಿ ಬಸ್​ ಒಂದು ಪ್ರವಾಹದ ನೀರಿನಲ್ಲಿ ಸಿಲುಕಿ ಪಲ್ಟಿಯಾಗಿದ್ದು, ಜೀವ ಉಳಿಸಿಕೊಳ್ಳಲು ಜನ ಪರದಾಡಿದ ಘಟನೆ ಪಂಜಾಬಿನಲ್ಲಿ ನಡೆದಿದೆ. ಘಟನೆಯೂ ಪಂಜಾಬ್​ನ ಅಂಬಾಲಾ-ಯಮುನಾನಗರ ಹೆದ್ದಾರಿಯಲ್ಲಿ ನಡೆದಿದ್ದು, ಪ್ರವಾಹದ ಹೊಡೆತಕ್ಕೆ ಸಿಲುಕಿ ಬಸ್​ ಪಲ್ಟಿಯಾಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಪ್ರಯಾಣಿಕರನ್ನು ಕ್ರೇನ್​ನ ಮೂಲಕ ರಕ್ಷಿಸುತ್ತಿರುವುದು ಕಂಡು ಬಂದಿದೆ. ಬಸ್​ನಲ್ಲಿ 70 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು … Continue reading ಪ್ರವಾಹದಲ್ಲಿ ಸಿಲುಕಿ ಬಸ್​ ಪಲ್ಟಿ; ಕ್ರೇನ್​ ಮೂಲಕ ರಕ್ಷಣೆ