ಮುಸ್ಲಿಂ ವಿರೋಧಿ ಹೇಳಿಕೆ; ಸಂಸದ ರಮೇಶ್​ ಬಿಧೂರಿ ವಿರುದ್ಧ ಶೋಕಾಸ್​ ನೋಟಿಸ್ ಜಾರಿ ಮಾಡಿದ ಬಿಜೆಪಿ

ನವದೆಹಲಿ: ಸಂಸತ್​ ಅಧಿವೇಶನದ ವೇಳೆ ಬಿಎಸ್​ಪಿ ಸದಸ್ಯ ಕುನ್ವರ್​ ಡ್ಯಾನಿಶ್​ ಅಲಿ ವಿರುದ್ಧ ಕೋಮು ಹೇಳಿಕೆ ನೀಡಿರುವ ಬಿಜೆಪಿ ಸಂಸದ ರಮೇಶ್​ ಬಿಧೂರಿ ವಿಪಕ್ಷ ಹಾಗೂ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತ ತಮ್ಮ ಹೇಳಿಕೆಗೆ ವಿವರಣೆ ನೀಡುವಂತೆ ಬಿಜೆಪಿ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ. ಗುರುವಾರ ಚಂದ್ರಯಾನ-3ರ ಮೇಲಿನ ಚರ್ಚೆ ನಡೆಯುತ್ತಿದ್ದ ವೇಳೆ ಮಾತನಾಡಿದ್ದ ರಮೇಶ್​ ಬಿಧೂರಿ ಬಿಎಸ್​ಪಿ ಸಂಸದ ಕುನ್ವರ್​ ಡ್ಯಾನಿಶ್​ ಅಲಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದರು. ಇವರ ಹೇಳಿಕೆ ಸಾಕಷ್ಟು ಖಂಡನೆಗೆ ಗುರಿಯಾಗಿತ್ತು … Continue reading ಮುಸ್ಲಿಂ ವಿರೋಧಿ ಹೇಳಿಕೆ; ಸಂಸದ ರಮೇಶ್​ ಬಿಧೂರಿ ವಿರುದ್ಧ ಶೋಕಾಸ್​ ನೋಟಿಸ್ ಜಾರಿ ಮಾಡಿದ ಬಿಜೆಪಿ