ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ; ಕುಮಾರಸ್ವಾಮಿ ಸ್ಪರ್ಧೆ?

ಬೆಂಗಳೂರು: ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡ ಬಳಿಕ ಲೋಕಸಭೆ ಚುನಾವಣೆ ವಿಚಾರದಲ್ಲಿ ರಾಜಕೀಯ ವಲಯದಲ್ಲಿ ದಿನಕ್ಕೊಂದು ಪುಕಾರುಗಳು ತರಗೆಲೆಯಂತೆ ಹಾರಾಡುತ್ತಿವೆ. ಮಂಡ್ಯ, ಹಾಸನ ಕ್ಷೇತ್ರಗಳು ಚರ್ಚೆಯ ತುತ್ತ ತುದಿಯಲ್ಲಿವೆ. ಮಂಡ್ಯದಲ್ಲಿ ಹಾಲಿ ಸಂಸದೆ ಸುಮಲತಾ ಇರುವುದರಿಂದ ಈ ಕ್ಷೇತ್ರದ ಸ್ಪರ್ಧೆ ಕುತೂಹಲ ಕೆರಳಿಸಿದೆ. ಅಂತೆ ಕಂತೆಗಳಿಗೆ ಆಡಂಬೋಲವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರ ಸುತ್ತ ಕೇಂದ್ರೀಕರಿಸಿ ವ್ಯಾಪಕ ಚರ್ಚೆಗಳು, ವ್ಯಾಖ್ಯಾನಗಳು, ಜಾತಿ ಸಮೀಕರಣದ ವಿಶ್ಲೇಷಣೆಗಳು, ಮೈತ್ರಿಯಿಂದ ಮತ ಧೃವೀಕರಣ ವಿಷಯಗಳು ಮಾತಿಗೆ ಸಿಲುಕಿವೆ. … Continue reading ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ; ಕುಮಾರಸ್ವಾಮಿ ಸ್ಪರ್ಧೆ?