ಬಜ್ಪೆ- ಮೂಡುಬಿದಿರೆ ರಾಜ್ಯ ಹೆದ್ದಾರಿ ಅಪಾಯಕಾರಿ

ಮೂಲ್ಕಿ: ಮೂಲ್ಕಿಯಿಂದ ಪ್ರಾರಂಭಗೊಳ್ಳುವ ಬಜ್ಪೆ- ಮೂಡುಬಿದಿರೆ ರಾಜ್ಯ ಹೆದ್ದಾರಿಯ ಆರಂಭದಲ್ಲಿಯೇ ಬೃಹತ್ ಹೊಂಡಗಳು ಮೂಡಿದ್ದು, ಪ್ರಯಾಣಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ವಿಜಯ ಸನ್ನಿಧಿ ಎದುರು ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆಯಲ್ಲಿಯೂ ಹೊಂಡ ಏರ್ಪಟ್ಟಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿದ್ದರೂ ಹೆದ್ದಾರಿ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮೂಲ್ಕಿಯಿಂದ ಪ್ರಾರಂಭಗೊಳ್ಳುವ ರಸ್ತೆಯ ಹೊಂಡ ಗುಂಡಿಗಳು ಕಾರ್ನಾಡು, ಗಾಂಧಿ ಮೈದಾನ, ಗೇರುಕಟ್ಟೆ, ಕೆಂಚನಕೆರೆ ಅಂಗರಗುಡ್ಡೆ ಹೀಗೇ ಮುಂದುವರಿಯುತ್ತಿದ್ದರೂ ಅಧಿಕಾರಿ ವರ್ಗ ಮೈಮರೆತಿದೆ. ಸುಪ್ರಿತಾ ತಂಡದ ಸೇವೆ … Continue reading ಬಜ್ಪೆ- ಮೂಡುಬಿದಿರೆ ರಾಜ್ಯ ಹೆದ್ದಾರಿ ಅಪಾಯಕಾರಿ