ಗುಂಪಿನಿಂದ ಬೇರ್ಪಟ್ಟ ಮರಿಯಾನೆ

ವಿಜಯವಾಣಿ ಸುದ್ದಿಜಾಲ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಕನ್ಯಾನದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಗುಂಪಿನಿಂದ ಪ್ರತ್ಯೇಕಗೊಂಡ ಮರಿಯಾನೆ ಕಾಣಸಿಕ್ಕಿದೆ. ಈ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಕೆಲ ತಿಂಗಳಿನಿಂದ ಮಂಡೆಕೋಲಿನಲ್ಲೇ ಬೀಡು ಬಿಟ್ಟಿರುವ ಆನೆಗಳ ಹಿಂಡಿನ ಒಂದು ಗುಂಪು ಗುರುವಾರ ತಡರಾತ್ರಿ ಕನ್ಯಾನ ಸುತ್ತಮುತ್ತ ತಿರುಗಾಡುತ್ತಿತ್ತು. ಆತಂಕದಲ್ಲೇ ರಾತ್ರಿ ಕಳೆದ ಸ್ಥಳೀಯರಿಗೆ ಬೆಳಗ್ಗಿನ ಜಾವ ಮತ್ತೆ ಆನೆ ಘೀಳಿಡುವ ಸದ್ದು ಕೇಳಿಸಿತ್ತು. ಕನ್ಯಾನದ ರಾಜಶೇಖರ ಭಟ್ ಎಂಬುವರ ಜಾಗದಲ್ಲಿ ಮರಿಯಾನೆ ಕಾಣಸಿಕ್ಕಿದೆ. ಎರಡು ತಿಂಗಳ ಪ್ರಾಯದ … Continue reading ಗುಂಪಿನಿಂದ ಬೇರ್ಪಟ್ಟ ಮರಿಯಾನೆ