ರಸ್ತೆ ತಿರುವಿನಲ್ಲಿ ಲಗೇಜ್​ ಆಟೋ ಪಲ್ಟಿ: ಮಂಡ್ಯ ಮೂಲದ ಮೂವರು ಸ್ಥಳದಲ್ಲೇ ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ

ರಾಮನಗರ: ಮಾಗಡಿ ತಾಲೂಕಿನ ನಾರಾಯಣಿಪಾಳ್ಯ ಗೇಟ್ ಬಳಿ ರಸ್ತೆ ತಿರುವಿನಲ್ಲಿ ಲಗೇಜ್ ಆಟೋ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ದರ್ಮರಣಕ್ಕಿಡಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಬೆಳ್ಳೂರು ಗ್ರಾಮದ ರತ್ನಮ್ಮ(53), ಲಕ್ಕಮ್ಮ(40) ಮತ್ತು ಮಂಜುನಾಥ್(32) ಮೃತ ದುರ್ದೈವಿಗಳು. ತರಕಾರಿ ತರಲೆಂದು 6 ಮಂದಿ ಲಗೇಜ್​ ಆಟೋದಲ್ಲಿ ಭಾನುವಾರ ರಾತ್ರಿ ಬೆಳ್ಳೂರು ಕ್ರಾಸ್​ನಿಂದ ನೆಲಮಂಗಲಕ್ಕೆ ಹೋಗುವಾಗ ಮಾರ್ಗಮಧ್ಯೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಪಲ್ಟಿಯಾಗಿದೆ. ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ರಂಗಣ್ಣ, ದರ್ಶನ್ ಹಾಗೂ ಚಾಲಕ ಸತೀಶ್​ … Continue reading ರಸ್ತೆ ತಿರುವಿನಲ್ಲಿ ಲಗೇಜ್​ ಆಟೋ ಪಲ್ಟಿ: ಮಂಡ್ಯ ಮೂಲದ ಮೂವರು ಸ್ಥಳದಲ್ಲೇ ದುರ್ಮರಣ, ಮೂವರ ಸ್ಥಿತಿ ಚಿಂತಾಜನಕ