ಬಂಗಾಳ : ಎಬಿವಿಪಿ ಸದಸ್ಯರ ಮೇಲೆರಗಿದರೇ… ಟಿಎಂಸಿ ರೌಡಿಗಳು?!

ಕೊಲ್ಕತಾ: ಚುನಾವಣೆಯ ಬಿಸಿ ಏರುತ್ತಿರುವ ಪಶ್ಚಿಮ ಬಂಗಾಳದಲ್ಲಿ, ಬಿಜೆಪಿಯನ್ನು ಬೆಂಬಲಿಸುತ್ತಿರುವ ಕಾರಣಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​(ಎಬಿವಿಪಿ)ನ ಇಬ್ಬರು ಸದಸ್ಯರ ಮೇಲೆ ತೃಣಮೂಲ ಕಾಂಗ್ರೆಸ್​​(ಟಿಎಂಸಿ) ರೌಡಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ನಡೆದಿರುವ ಹಲ್ಲೆಯಲ್ಲಿ ದುಷ್ಕರ್ಮಿಗಳು ರಿವಾಲ್ವರ್ ಮತ್ತು ಚಾಕುಗಳಿಂದ ಆಕ್ರಮಣ ನಡೆಸಿದರು ಎನ್ನಲಾಗಿದೆ. 24 ಪರಗಣ ಜಿಲ್ಲೆಯ ರಹಾರಾ ಬಜಾರ್​ನಲ್ಲಿ ನಿನ್ನೆ(ಮಾರ್ಚ್ 9) ಮಧ್ಯಾಹ್ನ ಎಬಿವಿಪಿ ಕಾರ್ಯಕರ್ತರಾದ ಸೌತನಿಕ್ ಬ್ಯಾನರ್ಜಿ ಮತ್ತು ಕೃಷ್ಣೇಂದು ಚಕ್ರಬೊರ್ತಿ ಎಂಬುವರ ಮೇಲೆ ಹಲ್ಲೆ ನಡೆದಿದೆ. … Continue reading ಬಂಗಾಳ : ಎಬಿವಿಪಿ ಸದಸ್ಯರ ಮೇಲೆರಗಿದರೇ… ಟಿಎಂಸಿ ರೌಡಿಗಳು?!