ಸುಡಾನ್​ನಿಂದ 754 ಮಂದಿ ಸ್ವದೇಶಕ್ಕೆ ವಾಪಸ್: ಆಪರೇಷನ್ ಕಾವೇರಿ ಮೂಲಕ ಈವರೆಗೆ 1,360 ಭಾರತೀಯರ ರಕ್ಷಣೆ

ನವದೆಹಲಿ: ಸಂಘರ್ಷ ಪೀಡಿತ ಸುಡಾನ್​ನಲ್ಲಿ ಸಿಲುಕಿರುವ ವರ ಪೈಕಿ 754 ಮಂದಿ ಶುಕ್ರವಾರ ಸ್ವದೇಶಕ್ಕೆ ಬಂದಿದ್ದಾರೆ. 392 ಜನರು ಸಿ-17 ಗ್ಲೋಬಲ್ ಮಾಸ್ಟರ್ ವಿಮಾನದಲ್ಲಿ ನವದೆಹಲಿಗೆ ಬಂದಿದ್ದು, ವಾಯುಪಡೆಯ ಇನ್ನೊಂದು ವಿಮಾನ 362 ಮಂದಿಯನ್ನು ಬೆಂಗಳೂರಿಗೆ ಕರೆತಂದಿದೆ. ಸುಡಾನ್​ನಿಂದ ಆಪರೇಷನ್ ಕಾವೇರಿ ಮೂಲಕ ಈವರೆಗೆ 1,360 ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಸುಡಾನ್​ನಲ್ಲಿರುವ ಭಾರತೀಯರನ್ನು ರೇವು ಪಟ್ಟಣ ಪೋರ್ಟ್ ಸುಡಾನ್​ಗೆ ಕರೆತರಲಾಗುತ್ತಿದ್ದು ಅಲ್ಲಿಂದ ಮೊದಲ ಹಂತದಲ್ಲಿ ಸೌದಿ ಅರೇಬಿಯಾದ ಜೆಡ್ಡಾಕ್ಕೆ … Continue reading ಸುಡಾನ್​ನಿಂದ 754 ಮಂದಿ ಸ್ವದೇಶಕ್ಕೆ ವಾಪಸ್: ಆಪರೇಷನ್ ಕಾವೇರಿ ಮೂಲಕ ಈವರೆಗೆ 1,360 ಭಾರತೀಯರ ರಕ್ಷಣೆ