ಲಾಕಪ್​ ಕಿರುಕುಳಕ್ಕೆ ದಲಿತ ಮಹಿಳೆ ಸಾವು: ಮೂವರು ಪೊಲೀಸರು ವಜಾ

ಹೈದರಾಬಾದ್ : ಲಾಕಪ್​ನಲ್ಲಿ ನೀಡಿದ ಕಿರುಕುಳದಿಂದಾಗಿ ದಲಿತ ಮಹಿಳೆಯೊಬ್ಬರು ಸಾವಪ್ಪಿದ್ದ ಪ್ರಕರಣದಲ್ಲಿ ಮೂವರು ಪೊಲೀಸರನ್ನು ಕೆಲಸದಿಂದ ವಜಾ ಮಾಡಲಾಗಿದೆ. ತೆಲಂಗಾಣದ ಅಡ್ಡಗುದೂರು ಪೊಲೀಸ್ ಠಾಣೆಯ ಇನ್ಸ್​​ಪೆಕ್ಟರ್​ ಆಗಿದ್ದ ವಿ.ಮಹೇಶ್ವರ್, ಪೇದೆಗಳಾಗಿದ್ದ ಎಂ.ಎ.ರಶೀದ್​ ಮತ್ತು ಪಿ.ಜನಯ್ಯ ವಜಾ ಆಗಿರುವವರು. ಖಮ್ಮಂ ಜಿಲ್ಲೆಯ ಚಿಂತಕಣಿಯ ನಿವಾಸಿಯಾಗಿದ್ದ 45 ವರ್ಷ ವಯಸ್ಸಿನ ಮರಿಯಮ್ಮ ಎಂಬುವರನ್ನು ಅಡ್ಡಗುದೂರು ಪೊಲೀಸರು ಕಳವಿನ ಆರೋಪದ ಮೇಲೆ ವಿಚಾರಣೆಗಾಗಿ ಕರೆತಂದಿದ್ದರು. ಪೊಲೀಸ್​ ಠಾಣೆಯಲ್ಲಿ ಪ್ರಜ್ನೆ ತಪ್ಪಿಬಿದ್ದಿದ್ದ ಆಕೆ ಜೂನ್ 18 ರಂದು ಸಾವಪ್ಪಿದ್ದರು. ಮೃತ ಮರಿಯಮ್ಮನೊಂದಿಗೆ ಠಾಣೆಗೆ … Continue reading ಲಾಕಪ್​ ಕಿರುಕುಳಕ್ಕೆ ದಲಿತ ಮಹಿಳೆ ಸಾವು: ಮೂವರು ಪೊಲೀಸರು ವಜಾ