ರಾಮೇಶ್ವರ ಕೆಫೆ ಸ್ಫೋಟ: ಬಾಂಬ್​ ಇಟ್ಟಿದ್ದ ಮುಸ್ಸಾವೀರ್, ಮಾಸ್ಟರ್​ ಮೈಂಡ್ ಮತೀನ್​ ತಹಾ ಅರೆಸ್ಟ್​​

ಬೆಂಗಳೂರು: ಇಂದು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಇಬ್ಬರು ಶಂಕಿತರೇ ಬೆಂಗಳೂರಿನ ರಾಮೇಶ್ವರ ಕೆಫೆ ಸ್ಫೋಟ ಪ್ರಕರಣದ ಪ್ರಮುಖ ಸಂಚುಕೋರರು ಎಂಬುದು ಬಯಲಾಗಿದೆ. ಇಬ್ಬರು ಶಂಕಿತರಲ್ಲಿ ಒಬ್ಬ ಕೆಫೆಗೆ ಬಾಂಬ್​ ಇಟ್ಟ ಉ್ರಗನೆಂಬುದು ತಿಳಿದುಬಂದಿದೆ. ಇಬ್ಬರನ್ನು ಪಶ್ಚಿಮ ಬಂಗಾಳದ ಪೂರ್ವ ಮಿದ್ನಾಪೂರ್​ ಜಿಲ್ಲೆಯ ಕಾಂಥಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಅಬ್ದುಲ್​ ಮತೀನ್​ ತಹಾ ಮತ್ತು ಮುಸ್ಸಾವೀರ್​ ಹುಸೇನ್ ಶಾಝೇಬ್​​ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ, ಕರ್ನಾಟಕ, ತೆಲಂಗಾಣ … Continue reading ರಾಮೇಶ್ವರ ಕೆಫೆ ಸ್ಫೋಟ: ಬಾಂಬ್​ ಇಟ್ಟಿದ್ದ ಮುಸ್ಸಾವೀರ್, ಮಾಸ್ಟರ್​ ಮೈಂಡ್ ಮತೀನ್​ ತಹಾ ಅರೆಸ್ಟ್​​