ಹೆಚ್ಚಾಗದ ವೇತನ, ‘108’ ಸಮಸ್ಯೆ: ಮನನೊಂದು ವಿಷ ಕುಡಿದ ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ

ಕೋಲಾರ: 108 ಆ್ಯಂಬುಲೆನ್ಸ್​ ಚಾಲಕರು ಆಗಾಗ ಸಮಸ್ಯೆಗೆ ಒಳಗಾಗಿ ಪ್ರತಿಭಟನೆ ನಡೆಸಿದ್ದು ಹಳೇ ಸಂಗತಿ. ಇದೀಗ ವೇತನ ಹೆಚ್ಚಳ ಮಾಡದೆ ನೂರೆಂಟು ಸಮಸ್ಯೆ ಉಂಟಾಗಿ ಆ್ಯಂಬುಲೆನ್ಸ್​ ಚಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೂ ನಡೆದಿದೆ. ಕೋಲಾರ ತಾಲೂಕು ವೇಮಗಲ್ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ಇಂಥದ್ದೊಂದು ಅಪಾಯಕಾರಿ ಪ್ರಯತ್ನಕ್ಕೆ ಮುಂದಾಗಿದ್ದ. ಅರುಣ್​ ಕುಮಾರ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದ ಆ್ಯಂಬುಲೆನ್ಸ್ ಚಾಲಕ. 108 ಆ್ಯಂಬುಲೆನ್ಸ್ ಚಾಲಕರ ವೇತನ ಪರಿಷ್ಕರಣೆ ಮಾಡದೇ ಇರುವುದರಿಂದ ಸಂಬಳದಲ್ಲಿ ಹೆಚ್ಚಳವಾಗಿಲ್ಲ. ಇದರಿಂದ ನೂರೆಂಟು ಸಮಸ್ಯೆ ಅನುಭವಿಸುವಂತಾಗಿದೆ … Continue reading ಹೆಚ್ಚಾಗದ ವೇತನ, ‘108’ ಸಮಸ್ಯೆ: ಮನನೊಂದು ವಿಷ ಕುಡಿದ ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ