ದೇವಾಲಯಕ್ಕೆ ಮಾಂಸದ ಹಾರ ತಂದುಕೊಟ್ಟ ಕಿಡಿಗೇಡಿಗಳು!

ದೇವನಹಳ್ಳಿ: ಇಬ್ಬರು ಖದೀಮರು ಇತಿಹಾಸ ಪ್ರಸಿದ್ಧ ಕನಸವಾಡಿಯ ಶನಿಮಹಾತ್ಮ ದೇವಾಲಯಕ್ಕೆ ಮಾಂಸದ ಹಾರ ತಂದುಕೊಟ್ಟು ಮೂರ್ತಿಯನ್ನು ವಿರೂಪಗೊಳಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಮಾಂಸದ ಹಾರ ಗರ್ಭಗುಡಿಯನ್ನು ಸೇರುವ ಮುನ್ನವೇ ಅಸಲಿಯತ್ತು ಗೊತ್ತಾಗಿದೆ. ದೇವಾಲಯಕ್ಕೆ ಬಂದ ಯುವಕರಿಬ್ಬರು ಹೂವಿನ ಹಾರದ ಮಧ್ಯೆ ಬರುವ ಪ್ಲಾಸ್ಟಿಕ್ ಪೇಪರ್ ಒಳಭಾಗದಲ್ಲಿ ಮಾಂಸವಿಟ್ಟಿದ್ದಾರೆ. ಕಿಡಿಗೇಡಿಗಳಿಬ್ಬರು ಭಕ್ತರ ಸೋಗಿನಲ್ಲಿ ಬಂದು ದೇವಾಲಯದ ಸಿಬ್ಬಂದಿಗಳಿಗೆ ತಂದಿರುವಂತಹ ಹಾರಗಳನ್ನು ನೀಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇದನ್ನೂ ಓದಿ: VIDEO| ಠಾಣೆಯಲ್ಲೇ ಮಹಿಳಾ ಸಿಬ್ಬಂದಿಯ ಸೀಮಂತ ಕಾರ್ಯ ನೆರವೇರಿಸಿದ … Continue reading ದೇವಾಲಯಕ್ಕೆ ಮಾಂಸದ ಹಾರ ತಂದುಕೊಟ್ಟ ಕಿಡಿಗೇಡಿಗಳು!