ಬಲಮುರಿಯಲ್ಲಿ ಮುಳುಗಿ ನಂ. ಗೂಡು ಯುವಕ ಸಾವು

blank

ಕೆ.ಆರ್. ಸಾಗರ : ಬೆಳಗೊಳ ಗ್ರಾಮದ ಬಳಿ ಬಲಮುರಿ ಪ್ರವಾಸಿ ತಾಣದಲ್ಲಿನ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಯುವ ಕಾರ್ಮಿಕ ಭಾನುವಾರ ಸಂಜೆ ಮುಳುಗಿ ಮೃತಪಟ್ಟಿದ್ದಾನೆ. ನಂಜನಗೂಡಿನ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿರುವ ಟಿ.ವಿ.ಎಸ್. ಫ್ಯಾಕ್ಟರಿ ನೌಕರ ಎಂ. ಪ್ರವೀಣ(22) ಮೃತ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಬಸಾಪುರ ಗ್ರಾಮ ಮೂಲದ ಪ್ರವೀಣ ಕಡಕೊಳದಲ್ಲಿ ವಾಸವಿದ್ದ. 6 ಜನ ಸ್ನೇಹಿತರೊಂದಿಗೆ ಭಾನುವಾರ ಬಲಮುರಿಗೆ ಪ್ರವಾಸ ಬಂದಿದ್ದ. ಮಿತ್ರರೊಂದಿಗೆ ನದಿಯಲ್ಲಿ ಈಜಾಡುತ್ತಿದ್ದ ಸಂದರ್ಭ ಮುಳಗಿದ. ಸ್ಥಳೀಯರು ಧಾವಿಸಿ ನೀರಿನಿಂದ ಈತನನ್ನು ಹೊರ ತೆಗೆದರೂ ಅಷ್ಟರಲ್ಲಿ ಮೃತನಾಗಿದ್ದ. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೆ.ಆರ್. ಸಾಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…