ಕೋಟ: ಕ್ಯಾನ್ಸರ್ನಿಂದ ಬಳಲುತ್ತಿರುವ ಕುಂದಾಪುರ ತಾಲೂಕು ಬೇಳೂರಿನ ಪ್ರಜ್ವಲ್ ಕೊಠಾರಿ ಎಂಬುವರ ಚಿಕಿತ್ಸಾ ವೆಚ್ಚ ಭರಿಸಲು ಕೋಟದ ದೇವಿಕಿರಣ್ ಮಿತ್ರ ಬಳಗ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರ ನೇತೃತ್ವದಲ್ಲಿ ಜೂ.25ರಂದು ಕೋಟದ ಸಿಎ ಬ್ಯಾಂಕ್ ಬಿ.ಸಿ.ಹೊಳ್ಳ ಸಭಾಂಗಣದಲ್ಲಿ ಅತಿಥಿ ಕಲಾವಿದರ ಸಮ್ಮುಖದಲ್ಲಿ ಯಕ್ಷಗಾನ ಆಯೋಜಿಸಲಾಗಿದೆ. ಕಾರ್ಯಕ್ರಮದ ಪೋಸ್ಟರನ್ನು ಕೋಟದ ಅಮೃತೇಶ್ವರಿ ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಆನಂದ್.ಸಿ.ಕುಂದರ್ ಶುಕ್ರವಾರ ಶ್ರೀ ದೇಗುಲದಲ್ಲಿ ಬಿಡುಗಡೆಗೊಳಿಸಿದರು.
ಕೋಟ ಸಹಕಾರಿ ವ್ಯವಸಾಯಕ ಸಂ ಅಧ್ಯಕ್ಷ ಡಾ.ಕೆ.ಕೃಷ್ಣ ಕಾಂಚನ್, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ದೇವಿ ಕಿರಣ್ ಕಾಂಪ್ಲೆಕ್ಸ್ ಮಾಲೀಕ ಶ್ರೀಕಾಂತ್ ಶೆಣೈ, ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ, ಚಂದ್ರ ಆಚಾರ್, ವಾಜಿ ಟ್ರಸ್ಟಿ ಸುಶೀಲ ಸೋಮಶೇಖರ್, ಕೋಟ ಸಹಕಾರಿ ಸಂದ ನಿರ್ದೇಶಕರಾದ ಟಿ.ಮಂಜುನಾಥ ಗಿಳಿಯಾರ್, ಮಹೇಶ್ ಶೆಟ್ಟಿ, ಮತ್ಸ್ಯೋದ್ಯಮಿ ರಾಜೇಂದ್ರ ಸುವರ್ಣ, ಕೋಟ ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟ ಅಮೃತೇಶ್ವರಿ ಮೇಳದ ವ್ಯವಸ್ಥಾಪಕ ಸುರೇಶ್ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಕಾರ್ಯದರ್ಶಿ ಚಂದ್ರ ಪೂಜಾರಿ, ಸ್ಥಳೀಯರಾದ ಆನಂದ ದೇವಾಡಿಗ, ದೇವಿ ಕಿರಣ್ ಬಳಗದ ಚೇತನ್ ಬಂಗೇರ, ಅವಿನಾಶ್ ಶೆಟ್ಟಿ ದೊಡ್ಮನೆ, ಜ್ಞಾನೇಶ್ ಆಚಾರ್, ಶಂಕರ್ ಕೋಟ, ಸುಜಾತ ಬಾಯರಿ, ಆದಿತ್ಯ, ಸಂದೀಪ ಸ್ಯಾಂಡಿ, ರತ್ನಾಕರ ಪೂಜಾರಿ ಮತ್ತಿತರರು ಇದ್ದರು.