More

    ಪ್ಲಾಸ್ಟಿಕ್ ಬಳಸಲ್ಲ ಪ್ರತಿಜ್ಞೆ ಮಾಡಿ

     ಯಾದಗಿರಿ: ಪ್ರತಿಯೊಬ್ಬರಲ್ಲೂ ಸಾಮಥ್ರ್ಯ ಇರುತ್ತದೆ. ನಮ್ಮಲ್ಲಿರುವ ದೌರ್ಬಲ್ಯದ ವಿಶ್ಲೇಷಣೆ ಮಾಡಿಕೊಂಡು ಕ್ರಿಯಾಶೀಲರಾಗಿ ಸಾಮಥ್ರ್ಯ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂಮರ್ಾರಾವ್ ಸಲಹೆ ನೀಡಿದರು.

    ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಜಿಲ್ಲಾಡಳಿತ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕ್ರೀಡಾ ಇಲಾಖೆ ಸಹಯೋಗದಡಿ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 158ನೇ ಜಯಂತ್ಯುತ್ಸವದಲ್ಲಿ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಭ್ಯಸಿಸುತ್ತಿರುವ ಅರ್ಹ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಿಸಿ ಅವರು ಮಾತನಾಡಿದರು.

    ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯವಿದೆ. ನಿಷೇಧಿತ ಪ್ಲಾಸ್ಟಿಕ್ ಬಳಸುವುದಿಲ್ಲ ಎಂದು ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು. ಸಂಚಾರ ನಿಮಯ ಪಾಲನೆ ಎಲ್ಲರ ಕರ್ತವ್ಯ. 18 ವರ್ಷ ಪೂರೈಸಿದ ಯುವಕ-ಯುವತಿಯರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ಕಿವಿಮಾತು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ಮಾತನಾಡಿ, ಓದಿನಲ್ಲಿ ಉನ್ನತ ಸಾಧನೆ ಮಾಡಲು ಮೊಬೈಲ್, ಲ್ಯಾಪ್ಟಾಪ್, ಟ್ಯಾಬ್ ಸೇರಿ ಸಾಕಷ್ಟು ಸಾಧನಗಳಿವೆ. ಇವುಗಳ ಸದ್ಬಳಕೆ ಮಾಡಿಕೊಂಡರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ಮನಸ್ಸಿನ ದುರ್ಬಲತೆಯನ್ನು ಮೆಟ್ಟಿ ನಿಂತಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು.

    ಇಂಗ್ಲಿಷ್ ಮತ್ತು ಗಣಿತ ಪರೀಕ್ಷೆಗಳನ್ನು ನಕಲು ಮಾಡದೆ ವಿದ್ಯಾಥರ್ಿಗಳು ಉತ್ತೀರ್ಣರಾಗುವುದಿಲ್ಲ ಎಂದು ಕೆಲವರು ಹೇಳುವುದು ಶುದ್ಧ ಸುಳ್ಳು. ವಿದ್ಯಾಥರ್ಿಗಳಿಗೆ ಓದುವುದೇ ಕೆಲಸ. ಸಮಯವನ್ನು ಹಾಳು ಮಾಡಿಕೊಳ್ಳಬಾರದು. ಸತತ ಪ್ರಯತ್ನ ಪಟ್ಟರೆ ಏನನ್ನಾದರೂ ಕಲಿಯಬಹುದು ಮತ್ತು ಸಾಧಿಸಬಹುದು. ಭಾಷೆ ಕಲಿಕೆಗೆ ಸಾಮಾನ್ಯ ಜ್ಞಾನ ಇರಬೇಕು. ನನ್ನದು ಮರಾಠಿ ಮಾತೃಭಾಷೆ ಆಗಿದ್ದರೂ ಕನರ್ಾಟಕಕ್ಕೆ ಬಂದ ಬಳಿಕ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತಿರುವೆ ಎಂದು ಹೇಳಿದರು.

    ರಾಮಕೃಷ್ಣ ಆಶ್ರಮದ ಸಂಚಾಲಕ ಪಿ.ವೇಣುಗೋಪಾಲ ಮಾತನಾಡಿ, ರಾಮಕೃಷ್ಣ ಪರಮಹಂಸ ಗುರುಗಳಿಂದ ಪ್ರಭಾವಿತರಾದ ಸ್ವಾಮಿ ವಿವೇಕಾನಂದ ದೇಶದ ಉದ್ದಗಲಕ್ಕೂ ಸಂಚರಿಸಿ ಭಾರತವನ್ನು ಸಮಗ್ರ ಅಧ್ಯಯನ ಮಾಡಿದ್ದಾರೆ. ಚೈತನ್ಯ ಯೋಗಿಯಾದ ವಿವೇಕಾನಂದರ ಪುಸ್ತಕ ಓದಿದವರು ಯೋಧರಾಗುತ್ತಾರೆ. ಚಿಕಾಗೋದಲ್ಲಿ ಭಾಷಣದ ಮೂಲಕ ವಿಶ್ವದ ಗಮನ ಸೆಳೆದ ವಿವೇಕಾನಂದ, ಶ್ರೀಲಂಕಾದ ಕೊಲಂಬೋದಿಂದ ಭಾರತದ ಆಲ್ಮೋರವರೆಗೆ ಯುವ ಜನಾಂಗವನ್ನು ಬಡಿದೆಬ್ಬಿಸಿದ ಏಕೈಕ ವ್ಯಕ್ತಿ ಎಂದು ಬಣ್ಣಿಸಿದರು.

    ಜಾಗತಿಕ ಯುಗದಲ್ಲಿ ಇಂಗ್ಲಿಷ್ ಕಲಿಕೆ ಅಗತ್ಯ. ಯುವ ಸಮುದಾಯ ವಿದ್ಯಾವಂತರಾಗಿ ವಿವೇಕಾನಂದರ ತತ್ವಾದರ್ಶಗಳನ್ನು ಪಾಲಿಸಿದರೆ ಹಿಂದುಳಿದ ಜಿಲ್ಲೆಯನ್ನು ಸವರ್ಾಂಗೀಣ ಪ್ರಗತಿಯತ್ತ ಕೊಂಡೊಯ್ಯಬಹುದು ಎಂದು ಹೇಳಿ ಮಕ್ಕಳ ಮನೋಬಲ ಹೆಚ್ಚಿಸಿದರು.

    ಲೀಡ್ ಕಾಲೇಜು ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ವಿದ್ಯಾಥರ್ಿಗಳಿಗೆ ಸಕರ್ಾರ ಉಚಿತವಾಗಿ ನೀಡಿದ ಲ್ಯಾಪ್ಟಾಪ್ಗಳನ್ನು ಶೈಕ್ಷಣಿಕ ಪ್ರಗತಿಗೆ ಮಾತ್ರ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

    ಕ್ರೀಡಾ ಇಲಾಖೆ ಪ್ರಭಾರಿ ಸಹಾಯಕ ನಿದರ್ೇಶಕ ಚನ್ನಬಸಪ್ಪ ಕುಳಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ದತ್ತಪ್ಪ ಸಾಗನೂರ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಅಯ್ಯಣ್ಣ ಹುಂಡೇಕಾರ್, ಸಿ.ಎಂ. ಪಟ್ಟೇದಾರ್, ಸ್ನೇಹಾ ರಸಾಳಕರ್, ಪ್ರಾಚಾರ್ಯರಾದ ಡಾ.ಅಶೋಕಕುಮಾರ ಮಟ್ಟಿ, ಡಾ.ಶ್ರೀನಿವಾಸರಾವ ದೊಡ್ಡಮನಿ, ಅಶೋಕ ವಾಟ್ಕರ್ ಉಪಸ್ಥಿತರಿದ್ದರು. ಚಂದ್ರಶೇಖರ ಗೋಗಿ ಪ್ರಾಥರ್ಿಸಿದರು. ಉಪನ್ಯಾಸಕಿ ಡಾ.ಜ್ಯೋತಿಲತಾ ತಡಿಬಿಡಿಮಠ ನಿರೂಪಣೆ ಮಾಡಿದರು.

    ವಿವಿಧ ಸ್ಪಧರ್ೆಗಳಲ್ಲಿ ವಿಜೇತ ವಿದ್ಯಾಥರ್ಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಇದಕ್ಕೂ ಮೊದಲು ಯುವ ಸಬಲೀಕರಣ ಕೇಂದ್ರವನ್ನು ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts