More

    ರಾಮಾಯಣದಿಂದ ಹೃತಿಕ್​ ಹೊರಕ್ಕೆ … ರಾವಣನಾಗ್ತಾರಾ ಯಶ್​?

    ಮುಂಬೈ: ಹಿಂದಿಯಲ್ಲಿ ರಾಮಾಯಣ ಕುರಿತು ಒಂದು ಚಿತ್ರವಾಗಲಿದೆ ಎಂಬ ಸುದ್ದಿ ಇಂದು, ನಿನ್ನೆಯದಲ್ಲ. ಆ ಚಿತ್ರದಲ್ಲಿ ರಣಬೀರ್​ ಕಪೂರ್​, ರಾಮನಾಗಿ ಕಾಣಿಸಿಕೊಂಡರೆ, ಹೃತಿಕ್​ ರೋಶನ್​, ರಾವಣಾಗಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಮೂಲಗಳ ಪ್ರಕಾರ, ಈ ಚಿತ್ರದಿಂದ ಹೃತಿಕ್​ ರೋಶನ್​ ಹೊರನಡೆದಿದ್ದು, ರಾವಣನ ಪಾತ್ರಕ್ಕೆ ಯಶ್​ಗೆ ಆಫರ್​ ಹೋಗಿದೆ ಎಂಬ ಗುಸುಗುಸು ಬಾಲಿವುಡ್​ನಲ್ಲಿ ಕೇಳಿಬರುತ್ತಿದೆ.

    ಇದನ್ನೂ ಓದಿ: ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ. ವಿಷ್ಣುವರ್ಧನ್​ ಪುಣ್ಯಭೂಮಿ ತೆರವು ಮಾಡೋದಕ್ಕೆ ಬಿಡುವುದಿಲ್ಲ ಎಂದು ಅನಿರುದ್ಧ

    ಈಗಾಗಲೇ ಕೆಲವು ನೆಗೆಟಿವ್​ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹೃತಿಕ್​ಗೆ ಇನ್ನಷ್ಟು ನೆಗೆಟಿವ್​ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಆಸಕ್ತಿ ಇಲ್ಲವಂತೆ. ಅದನ್ನು ನಿರ್ಮಾಪಕರಿಗೆ ನಯವಾಗಿಯೇ ಹೇಳಿರುವ ಅವರು, ಚಿತ್ರತಂಡದಿಂದ ಹೊರ ಬಂದಿದ್ದಾರಂತೆ. ಹಾಗಾದರೆ, ಅವರ ಬದಲಿ ಯಾರು? ಅವರ ಪಾತ್ರವನ್ನು ಯಾರಿಂದ ಮಾಡಿಸಬಹುದು ಎಂದು ಚಿತ್ರತಂಡದವರು ತಲೆ ಕೆಡಿಸಿಕೊಂಡಾಗ, ಅವರಿಗೆ ಹೊಳೆದಿದ್ದು ಕನ್ನಡಿಗ ಯಶ್​ ಹೆಸರು.

    ಯಶ್​ ಇದೀಗ ಒಳ್ಳೊಳ್ಳೆಯ ಪಾತ್ರಗಳಿಗೆ ಹುಡುಕಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ರಾವಣನ ಪಾತ್ರಕ್ಕೆ ಅವರು ಸಖತ್ತಾಗಿ ಫೀಟ್​ ಆಗುತ್ತಾರಂತೆ. ಹಾಗಾಗಿ, ಒಮ್ಮೆ ಅವರನ್ನು ಕೇಳಿಯೇ ಬಿಡೋಣ ಎಂದು ಯಶ್​ ಅವರನ್ನು ನಿರ್ಮಾಪಕರಾದ ಮಧು ಮಂಟೇನಾ ಮುಂದಾಗಿದ್ದಾರಂತೆ. ಯಶ್​ ಸಹ ಆಸಕ್ತಿ ತೋರಿಸಿದ್ದು, ಎಲ್ಲ ಅಂದುಕೊಂಡಂತೆ ಆದರೆ, ರಾಮಾಯಣದಲ್ಲಿ ರಾಮನಾಗಿ ರಣಬೀರ್​ ಕಪೂರ್ ಮತ್ತು ರಾವಣನಾಗಿ ಯಶ್​ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಡಾ: ವಿಷ್ಣು ಸ್ಮಾರಕ ಉದ್ಘಾಟನೆ; ಇದು ಹೋರಾಟವಲ್ಲ, ತಪಸ್ಸು ಎಂದ ಡಾ. ಭಾರತಿ ವಿಷ್ಣುವರ್ಧನ್​

    ಆದರೆ, ಯಶ್​ ಇದಕ್ಕೆ ಒಪ್ಪುತ್ತಾರಾ? ರಾವಣನಾಗಿ ನಟಿಸುತ್ತಾರಾ? ಎಂಬ ಪ್ರಶ್ನೆಗಳು ಎಲ್ಲರಲ್ಲೂ ಇದೆ. ಇದಕ್ಕೆ ಅವರೇ ಉತ್ತರಿಸಬೇಕು.

    ಡಾ. ವಿಷ್ಣುವರ್ಧನ್ ಅವ್ರು ‘ಕರ್ನಾಟಕ ರತ್ನ’ ಅಲ್ಲವೇ? ಸಿಎಂಗೆ ಅಭಿಮಾನಿಗಳ ಪ್ರಶ್ನೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts