ಇಲ್ಲಿ ಇಡೀ ಗ್ರಾಮವೇ ಜಲಾವೃತ; ರಾಜಕಾಲುವೆ ಒತ್ತುವರಿಯಿಂದ ಅವಾಂತರ, ಜನರಲ್ಲಿ ತೀವ್ರ ಆತಂಕ..
ಆನೇಕಲ್: ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ನಿನ್ನೆಯಿಡೀ ಸುರಿದ ಭಾರಿ ಮಳೆಗೆ ಭಾರಿ ಅನಾಹುತಗಳು ಸೃಷ್ಟಿಯಾಗಿದ್ದು, ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ನಲ್ಲಂತೂ ಒಂದಿಡೀ ಗ್ರಾಮವೇ ಜಲಾವೃತಗೊಂಡಿದ್ದು, ಅಲ್ಲಿನ ಜನತೆ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಆನೇಕಲ್ ತಾಲೂಕಿನ ಬನಹಳ್ಳಿ ಸುತ್ತಮುತ್ತಲಿನ ಪ್ರದೇಶ ಪೂರ್ತಿ ನೀರು ಆವರಿಸಿಕೊಂಡಿದ್ದು, ಮನೆ, ಅಂಗಡಿ-ಮುಂಗಟ್ಟು, ಹೊಲ, ಗದ್ದೆ ಎಲ್ಲವೂ ಜಲಾವೃತವಾಗಿದೆ. ನೋಟ ಹಾಯಿಸಿದಲ್ಲೆಲ್ಲ ನೀರೇ ಕಾಣಿಸುತ್ತಿದ್ದು, ಜನರು ಮನೆಗೆ ನುಗ್ಗಿರುವ ನೀರು ಹೊರಹಾಕಲು ಪರದಾಡುತ್ತಿದ್ದಾರೆ. ಇದನ್ನೂ ಓದಿ: ಬಿಡಿಎನಲ್ಲಿ ಭಾರಿ … Continue reading ಇಲ್ಲಿ ಇಡೀ ಗ್ರಾಮವೇ ಜಲಾವೃತ; ರಾಜಕಾಲುವೆ ಒತ್ತುವರಿಯಿಂದ ಅವಾಂತರ, ಜನರಲ್ಲಿ ತೀವ್ರ ಆತಂಕ..
Copy and paste this URL into your WordPress site to embed
Copy and paste this code into your site to embed