ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ವೇನಲ್ಲಿ ವ್ಹೀಲಿಂಗ್: ನಾಲ್ವರ ಬಂಧನ, 2 ಬೈಕ್​ ವಶಕ್ಕೆ​

ರಾಮನಗರ: ಸಾಲು ಸಾಲು ಅಪಘಾತಗಳಿಂದ ಅಪಖ್ಯಾತಿ ಗುರಿಯಾಗಿರುವ ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ವೇನಲ್ಲಿ ವ್ಹೀಲಿಂಗ್​ ಮಾಡುವ ಮೂಲಕ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಪುಂಡರನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಿ, ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪುಂಡರು ಕಳೆದ ನಾಲ್ಕೈದು ತಿಂಗಳಿಂದ ಎಕ್ಸ್​ಪ್ರೆಸ್​ವೇನಲ್ಲಿ ಆಗಾಗ ವ್ಹೀಲಿಂಗ್ ಮಾಡುತ್ತಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಕುಂಬಳಗೊಡು, ಬಿಡದಿ, ಕೆಂಗೇರಿ ರಸ್ತೆಯಲ್ಲಿ ಪುಂಡರು ವ್ಹೀಲಿಂಗ್​ ಮಾಡಿದ್ದರು. ಇದನ್ನೂ ಓದಿ: ವಿರೋಧದ ಮಧ್ಯೆಯೂ ಪ್ರಿಯಕರನನ್ನು ವರಿಸಿದ ಯುವತಿ: … Continue reading ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ವೇನಲ್ಲಿ ವ್ಹೀಲಿಂಗ್: ನಾಲ್ವರ ಬಂಧನ, 2 ಬೈಕ್​ ವಶಕ್ಕೆ​