
ಮಹಾಲಿಂಗಪುರ: ರನ್ನಬೆಳಗಲಿಯಿಂದ ನೇರವಾಗಿ ಮಹಾಲಿಂಗಪುರಕ್ಕೆ ಆಗಮಿಸಿದ ರನ್ನ ವೈಭವ ರಥಯಾತ್ರೆಗೆ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಡಿ ಮಜಲು, ಡೊಳ್ಳು ಕುಣಿತ ಸಹಿತ ಮಂಗಲವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಶಾಸಕ ಸಿದ್ದು ಸವದಿ, ರಬಕವಿ-ಬನಹಟ್ಟಿ ತಹಸೀಲ್ದಾರ್ ಗಿರೀಶ ಸ್ವಾದಿ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಚೇರ್ಮನ್ ಅಬ್ದುಲ್ರಜಾಕ ಬಾಗವಾನ, ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಬಿಜೆಪಿ ಮುಖಂಡ ಸುರೇಶ ಅಕ್ಕಿವಾಟ, ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಬಲವಂತಗೌಡ ಪಾಟೀಲ, ಚನಬಸು ಯರಗಟ್ಟಿ, ಬಸವರಾಜ ಕರೆಹೊನ್ನ, ಗಣ್ಯರಾದ ಮಹಾಲಿಂಗ ಮಾಳಿ, ಚನ್ನಪ್ಪ ಪಟ್ಟಣಶೆಟ್ಟಿ, ಲಕ್ಷ್ಮಣ ಮಾಂಗ, ನಜೀರ ಝಾರೆ, ಜಿ.ಎಸ್. ಗೊಂಬಿ, ಶಿವಾನಂದ ಅಂಗಡಿ, ಸಂಜು ಚನ್ನಾಳ, ಅರ್ಜುನ ದೊಡಮನಿ, ಆನಂದ ಬಂಡಿ, ಈರಪ್ಪ ಸೊನ್ನದ, ಬಿ.ಎನ್.ಅರಕೇರಿ, ವಿಜಯಕುಮಾರ ಕುಳಲಿ, ಪಿಎಸ್ಐ ಕಿರಣಕುಮಾರ ಸತ್ತಿಗೇರಿ ಇದ್ದರು.