ಮುಂಡ್ಲಿಯಲ್ಲಿ ಜಲಮಟ್ಟ ಕುಸಿತ: ಕಾರ್ಕಳ ನಗರಕ್ಕೆ ಕಾದಿದೆ ಸಂಕಷ್ಟ, ಎರಡು ದಿನಕೊಮ್ಮೆ ನೀರು ಬಿಡಲು ತೀರ್ಮಾನ

ಹರಿಪ್ರಸಾದ್ ನಂದಳಿಕೆ ಕಾರ್ಕಳದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ತಾಪಮಾನದಿಂದ ಜಲಮಟ್ಟ ಕುಸಿಯುತ್ತಿದ್ದು, ಕಾರ್ಕಳ ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ನೀರಿಗೆ ತತ್ವಾರ ಎದುರಾಗುವ ಸಾಧ್ಯತೆಗಳಿವೆ. ಕಾರ್ಕಳದ ಪಟ್ಟಣ ಪ್ರದೇಶಗಳಿಗೆ ಪ್ರಮುಖವಾಗಿ ನೀರು ಪೂರೈಕೆ ಮಾಡುವ ಮುಂಡ್ಲಿ ಅಣೆಕಟ್ಟೆಯಲ್ಲಿ ಜಲಮಟ್ಟ ಕುಸಿಯುತ್ತಿದ್ದು, ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ದುರ್ಗಾ ಗ್ರಾಮ ಪಂಚಾಯತಿಯ ಗಡಿ ಭಾಗದಲ್ಲಿ ಹರಿಯುವ ಸ್ವರ್ಣ ನದಿಗೆ ಕಟ್ಟಲಾದ ಅಣೆಕಟ್ಟೆ ಇದಾಗಿದ್ದು, ಇಲ್ಲಿ ನೀರು ಸಂಗ್ರಹಿಸಿ ಕಾರ್ಕಳಕ್ಕೆ ಹರಿಸುವ ಪ್ರಕ್ರಿಯೆ 1994ರಿಂದ ಆರಂಭಗೊಂಡಿದೆ. ಸುಮಾರು 22 … Continue reading ಮುಂಡ್ಲಿಯಲ್ಲಿ ಜಲಮಟ್ಟ ಕುಸಿತ: ಕಾರ್ಕಳ ನಗರಕ್ಕೆ ಕಾದಿದೆ ಸಂಕಷ್ಟ, ಎರಡು ದಿನಕೊಮ್ಮೆ ನೀರು ಬಿಡಲು ತೀರ್ಮಾನ