ಚರಂಡಿ ಕಾಮಗಾರಿ ಅಪೂರ್ಣ

blank

ಲೋಕೇಶ್ ಎಂ. ಐಹೊಳೆ ಜಗಳೂರು

ಚಿತ್ರದುರ್ಗ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ- 50 ರಸ್ತೆ ಕಾಮಗಾರಿ ಲೋಪದಿಂದ ಕಲ್ಲೇದೇವರಪುರ ಸೇರಿ ಕೆಲವು ಗ್ರಾಮಗಳಲ್ಲಿ ಚರಂಡಿ ಸಮಸ್ಯೆಯಿಂದ ಜನರು ಸಂಕಷ್ಟ ಎದುರಿಸಿದರೆ, ಇನ್ನು ಕೆಲವರು ಪರಿಹಾರದ ಹಣ ಸಿಗದೇ ಅಲೆದಾಡುವಂತಾಗಿದೆ.

ಕಲ್ಲೇದೇವರಪುರ, ಬಸಪ್ಪನಹಟ್ಟಿ ಸೇರಿ ಕೆಲವು ಗ್ರಾಮಗಳ ಜನರು ರಸ್ತೆ ಅಗಲೀಕರಣಕ್ಕೆ ಮನೆಗಳನ್ನು ಕಳೆದುಕೊಂಡಿದ್ದರು. ಕಾಮಗಾರಿ ಕೈಗೆತ್ತಿಕೊಂಡಿದ್ದ ಎಲ್​ಆಂಡ್​ಟಿ ಕಂಪನಿ ಕೆಲವರಿಗೆ ಪರಿಹಾರದ ಹಣ ನೀಡಿದೆ. ಇನ್ನು ಕೆಲವರಿಗೆ ಪರಿಹಾರ ಹಣ ಸಿಗದೆ ಸಂಕಷ್ಟದಲ್ಲಿದ್ದಾರೆ.

ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಎಷ್ಟೇ ಮನವಿ, ಹೋರಾಟ ಮಾಡಿದರೂ ಕಂಪನಿಯವರು ಕಿವಿಗೊಡುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಕಾಮಗಾರಿ ಆರಂಭಕ್ಕೂ ಮುನ್ನ ರಸ್ತೆ, ಚರಂಡಿ ನಿರ್ವಿುಸುವುದಾಗಿ ಭರವಸೆ ನೀಡಿದ್ದರು, ಆದರೆ, ಚರಂಡಿಯನ್ನು ಅರೆಬರೆ ಮಾಡಿ ಅರ್ಧಕ್ಕೆ ಬಿಟ್ಟಿದ್ದಾರೆ. ಮಳೆ ಮತ್ತು ತ್ಯಾಜ್ಯ ನೀರು ಹರಿದು ಹೋಗಲು ದಾರಿ ಇಲ್ಲದೆ ಒಂದೆಡೆ ಸೇರಿ ಮಿನಿ ಕೆರೆಯಂತೆ ನಿರ್ವಣವಾಗಿದೆ. ಇದರ ದುರ್ವಾಸನೆ ನಿವಾಸಿಗಳಿಗೆ ಉಸಿರುಗಟ್ಟಿದ ವಾತಾವರಣವನ್ನುಂಟು ಮಾಡಿದೆ.

ತೆರೆದ ಪೈಪ್​ಲೈನ್: ಶಾಂತಿಸಾಗರದಿಂದ ಜಗಳೂರು ಪಟ್ಟಣಕ್ಕೆ ಪೈಪ್​ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಪೈಪ್​ಗಳನ್ನು ಸ್ಥಳಾಂತರಿಸಲಾಗಿತ್ತು. ಆದರೆ, ಕಂಪನಿಯ ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಕಲ್ಲೇದೇವರಪುರ ಬ್ರಿಡ್ಜ್ ಕೆಳಗಿನ ಪೈಪ್ ಮುಚ್ಚಲಾಗಿಲ್ಲ. ಇದರಿಂದ ಕಾರು, ಬೈಕ್ ಸವಾರರು ರಸ್ತೆ ದಾಟಲು ಹರಸಾಹಸ ಪಡುವಂತಾಗಿದೆ. ಆಕಸ್ಮಿಕವಾಗಿ ಪೈಪ್ ಒಡೆದರೆ ಸಾಕಷ್ಟು ನೀರು ಪೋಲಾಗುತ್ತದೆ. ಇದರಿಂದ ಪಟ್ಟಣ ಪಂಚಾಯಿತಿ ಬೊಕ್ಕಸಕ್ಕೆ ಹೊಡೆತ ಬೀಳಲಿದೆ. ಗ್ರಾಮಸ್ಥರು ಕಂಪನಿಯ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.

 

ಗ್ರಾಮದಲ್ಲಿ ಒಂದು ರಸ್ತೆ, ಚರಂಡಿಯೂ ನೆಟ್ಟಗಿಲ್ಲ, ಸರಿಪಡಿಸಿಕೊಡುವಂತೆ ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಲಾಗಿದ್ದು, ಇದೀಗ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ.

-ತಿಪ್ಪೇಸ್ವಾಮಿ, ಗ್ರಾಮದ ಮುಖಂಡ.

 

ಊರಿನ ಕಲುಷಿತ ನೀರೆಲ್ಲ ಮನೆಗಳ ಮುಂದೆ ನಿಂತು ದೊಡ್ಡ ಗುಂಡಿ ಬಿದ್ದಿದೆ. ಚರಂಡಿಗಳಲ್ಲಿ ತ್ಯಾಜ್ಯ ನೀರು ತುಂಬಿಕೊಂಡು ದುರ್ವಾಸನೆ ಬೀರುತ್ತಿವೆ. ಬೆಳಗ್ಗೆ ಮತ್ತು ರಾತ್ರಿ ವೇಳೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ನಿದ್ರೆ ಮಾಡಲು ಸಾದ್ಯವಾಗುತ್ತಿಲ್ಲ. ಗುತ್ತಿಗೆದಾರರ ನಿರ್ಲಕ್ಷ್ಯ್ಕೆ ಗ್ರಾಮವೇ ಅನಾರೋಗ್ಯಕ್ಕೆ ತುತ್ತಾಗುತ್ತಿದೆ.

-ಸಣ್ಣ ಸೂರಪ್ಪ, ತಾ.ಪಂ ಮಾಜಿ ಅಧ್ಯಕ್ಷ

 

ಎನ್​ಎಚ್​ಐಯವರು ಹೊಸದಾಗಿ ಕಾಮಗಾರಿ ಕ್ರಿಯಾಯೋಜನೆ ರೂಪಿಸಿ ಟೆಂಡರ್ ಕರೆಯಬೇಕಾಗಿದೆ. ಈ ಬಗ್ಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ಮಾಡಿದ್ದಾರೆ. ತಾತ್ಕಾಲಿಕವಾಗಿ ಜಿಲ್ಲಾ ಪಂಚಾಯಿತಿ ಇಲಾಖೆಯು ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡಲಿದೆ.

-ರವಿ, ಇಂಜಿನಿಯರ್

Share This Article

ಬೇಸಿಗೆಯಲ್ಲಿ ತಣ್ಣನೆಯ ನಿಂಬೆ ಜ್ಯೂಸ್ ಕುಡಿಯುವ ಮುನ್ನ ಎಚ್ಚರ..!Lemon Juice

Lemon Juice: ನಿಂಬೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೇಸಿಗೆಯಲ್ಲಿ…

ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಒಮ್ಮೆ ಹೀಗೆ ಮಾಡಿ ನೋಡಿ..Gastric Problem

Gastric Problem: ಪ್ರಸ್ತುತ ಯುಗದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಅನೇಕ ಜನರನ್ನು ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಅನಾರೋಗ್ಯಕರ…

ನಡೆಯುವಾಗ ನಿಮಗೆ ಈ ಸಮಸ್ಯೆಗಳು ಕಾಡುತ್ತಿವೆಯೇ? ಸಕ್ಕರೆ ಕಾಯಿಲೆಯ ಲಕ್ಷಣ ಇರಬಹುದು ಎಚ್ಚರ! Walking

Walking : ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ವಯಸ್ಸಿನ ಹೊರತಾಗಿಯೂ, ಚಿಕ್ಕವರಿಂದ ಹಿಡಿದು…