ತ್ಯಾಜ್ಯ ಸಮಸ್ಯೆ ‘ಲೋಕಾ’ ಕೋರ್ಟ್ ಮುಂದೆ

blank

ಗೋಕರ್ಣ: ಇಲ್ಲಿನ ಘನ ಮತ್ತು ಹಸಿ ತ್ಯಾಜ್ಯ ಸಮಸ್ಯೆ ಬಗ್ಗೆ ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ಪರಿಸರ ಸಂಬಂಧಿ ಸಂಘಟನೆಯೊಂದರ ವತಿಯಿಂದ ಪ್ರಕರಣ ದಾಖಲಾಗಿದೆ. ಇಲ್ಲಿನ ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ, ಜಲಮೂಲ ಮತ್ತು ಅರಣ್ಯ ಮಾಲಿನ್ಯ ಹಾಗೂ ಗ್ರೀನ್-ಗೋಕರ್ಣ ಯೋಜನೆ ಕುರಿತು ಈಗಾಗಲೇ ಸಲ್ಲಿಸಲಾದ ಮನವಿಗೆ ಉತ್ತರಿಸದ ಮತ್ತು ಕ್ರಮ ಜರುಗಿಸದ ಬಗ್ಗೆ ಜಿಲ್ಲಾ ಪಂಚಾಯಿತಿ ವಿರುದ್ಧ ಕಳೆದ ಏಪ್ರೀಲ್​ನಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಜಿಲ್ಲಾ ವರಿಷ್ಠ ಕುಮಾರಚಂದ್ರ ಅವರ ನೇತೃತ್ವದಲ್ಲಿ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಲಾಯಿತು.

ಇಲ್ಲಿನ ಘನ ಮತ್ತು ಜಲ ತ್ಯಾಜ್ಯಗಳು ಬಂದು ಸೇರುವ ಸಮುದ್ರ ತೀರದ ಸಂಗಮ ನಾಲೆಯ ಪರಿಸರವನ್ನು ಖುದ್ದಾಗಿ ವೀಕ್ಷಿಸಿದ ಅಧಿಕಾರಿಗಳು ಪರಿಸ್ಥಿತಿಯನ್ನು ದಾಖಲಿಸಿಕೊಂಡರು.

ಇದಕ್ಕೂ ಮುನ್ನ ಸ್ಥಳೀಯ ಪಂಚಾಯಿತಿಗೆ ಭೇಟಿ ನೀಡಿದ ಅಧಿಕಾರಿಗಳು ದೂರಿಗೆ ಸಂಬಂಧಿಸಿದ ಕಡತಗಳ ತಪಾಸಣೆ ನಡೆಸಿದರು. ಈ ಹಿಂದೆಯೇ ಲೋಕಾಯುಕ್ತ ವತಿಯಿಂದ ತ್ಯಾಜ್ಯ ಘಟಕಗಳನ್ನು ಸಂದರ್ಶಿಸಲಾಗಿದ್ದು, ಇವುಗಳ ಕುರಿತಾದ ಸಂಪೂರ್ಣ ಮಾಹಿತಿಯ ಕಡತವನ್ನು ಸಿದ್ಧವಿರಿಸಲು ಪಂಚಾಯಿತಿಗೆ ಆದೇಶಿಸಿದರು.

ಭೇಟಿ ಬಗ್ಗೆ ಮಾತನಾಡಿದ ಲೋಕಾಯುಕ್ತ ಎಸ್.ಪಿ. ಕುಮಾರಚಂದ್ರ ಅವರು ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಲಾದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ದಾಖಲೆಗಳು ಮತ್ತು ಸ್ಥಳವನ್ನು ಪರಿಶೀಲಿಸಲಾಗಿದೆ. ದೂರಿಗೆ ಸಂಬಂಧಿಸಿದಂತೆ ಈ ತನಕ ಕೈಗೊಳ್ಳಲಾದ ವ್ಯವಸ್ಥೆ, ಅನುದಾನದ ನಿರ್ವಹಣೆ ಇನ್ನಿತರ ಎಲ್ಲ ಮಾಹಿತಿಗಳನ್ನು ಕಲೆ ಹಾಕಿ ನಂತರ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ಲೋಕಾಯುಕ್ತ ಇನ್​ಸ್ಪೆಕ್ಟರ್ ಪ್ರಸಾದ ಪನ್ನೇಕರ, ವಿನಾಯಕ ಬಿಲ್ಲವ, ಗ್ರಾಪಂ ಪಿಡಿಒ ಮಂಜುನಾಥ ಕೊಡದ, ವಿನಾಯಕ ಸಿದ್ದಾಪುರ, ಇತರರಿದ್ದರು.

 

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…