More

    ತ್ಯಾಜ್ಯ ನಿರ್ವಹಣೆ ಜಾಗೃತಿ

    ಪಾಂಡವಪುರ: ಪಟ್ಟಣದ ಹನುಮಂತನಗರದಲ್ಲಿ ಪುರಸಭೆ ವತಿಯಿಂದ ಬುಧವಾರ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಸದಸ್ಯ ಚಂದ್ರು ಮಾತನಾಡಿ, ಪುರಸಭೆಯಿಂದ ಪ್ರತಿ ಮನೆಗೆ ಬಕೆಟ್ ವಿತರಿಸಲಾಗಿದ್ದು, ಪ್ರತಿಯೊಬ್ಬರು ಹಸಿ ಕಸವನ್ನು ಹಸಿರು ಬಕೆಟ್ ಮತ್ತು ಒಣ ಕಸವನ್ನು ನೀಲಿ ಬಕೆಟ್‌ಗೆ ಹಾಕಿ ಮನೆ ಬಾಗಿಲಿಗೆ ಬರುವ ಪುರಸಭೆ ವಾಹನಕ್ಕೆ ನೀಡಬೇಕು ಎಂದು ಕೋರಿದರು. ಪರಿಸರ ಇಂಜಿನಿಯರ್ ಶಫಿನಾಜ್, ಪುರಸಭೆ ನೌಕರರಾದ ಶೇಖರ್, ಸುಬ್ರಹ್ಮಣ್ಯ, ನಂದೀಶ ಇತರರು ಇದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts