ವೋಟಿಂಗ್​ ಬದಲು ಮತಗಟ್ಟೆ ಧ್ವಂಸ! ಮತಯಂತ್ರಕ್ಕೆ ಬೆಂಕಿ ಹಚ್ಚಿ, ಅಧಿಕಾರಿಗಳ ಮೇಲೆ ಹಲ್ಲೆ

ಚಾಮರಾಜನಗರ: ಮೂಲಸೌಕರ್ಯಗಳನ್ನು ನೀಡಬೇಕೆಂದು ಮತದಾನ ಬಹಿಷ್ಕಾರ ಹಾಕಿದ್ದ ಮಲೆ ಮಹದೇಶ್ವರ ಬೆಟ್ಟದ ಕುಗ್ರಾಮ ಇಂಡಿಗನತ್ತದಲ್ಲಿ ಮತದಾನ ಮಾಡಲೇಬೇಕೆಂದು ಒತ್ತಾಯ ಮಾಡಿದ್ದಕ್ಕೆ ಮತಗಟ್ಟೆ ಧ್ವಂಸಗೊಳಿಸಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ತಪ್ಪಲಿನ ಇಂಡಿಗನತ್ತ ಗ್ರಾಮದಲ್ಲಿ ಗ್ರಾಮಸ್ಥರಿಂದ ತಹಸೀಲ್ದಾರ್, ಇನ್ಸ್‍ಪೆಕ್ಟರ್ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದು, ಮತ ಯಂತ್ರಕ್ಕೆ ಬೆಂಕಿ ಇಡಲಾಗಿದೆ. ಇದನ್ನೂ ಓದಿ: ಒಂದೇ ದಿನದಲ್ಲಿ 20% ಏರಿಕೆ; ಅಪ್ಪರ್​ ಸರ್ಕ್ಯೂಟ್​ ಹಿಟ್​: ಷೇರು ಬೆಲೆ ಏರಿಕೆ ಕಾರಣಗಳೇನು? ಚುನಾವಣೆ ಬಹಿಷ್ಕಾರದ ಹಿನ್ನಲೆ … Continue reading ವೋಟಿಂಗ್​ ಬದಲು ಮತಗಟ್ಟೆ ಧ್ವಂಸ! ಮತಯಂತ್ರಕ್ಕೆ ಬೆಂಕಿ ಹಚ್ಚಿ, ಅಧಿಕಾರಿಗಳ ಮೇಲೆ ಹಲ್ಲೆ