ಮದ್ದೂರು: ಕೆ.ಪಿ.ನಂಜುಂಡಿ ಅವರು ವಿಧಾನಪರಿಷತ್ ಸದಸ್ಯರಾದ ನಂತರ ವಿಶ್ವ ಕರ್ಮ ಸಮಾಜವನ್ನು ನಿರ್ಲಕ್ಷ್ಯ ಮಾಡಿರುವುದರಿಂದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ತೈಲೂರು ಆನಂದಚಾರಿ ತಿಳಿಸಿದರು.
ಪಟ್ಟಣದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೆ.ಪಿ.ನಂಜುಂಡಿ ಅವರು ವಿಧಾನ ಪರಿಷತ್ ಸದಸ್ಯರಾದ ನಂತರ ಸಮಾಜಕ್ಕೆ ಗುರುತರವಾದ ಅನುಕೂಲಗಳು ಆಗಿಲ್ಲ. ವಿಶ್ವ ಕರ್ಮ ಜನಾಂಗವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದರಿಂದ ಬೇಸರದಿಂದ ನಾನು, ತಾಲೂಕು ಅಧ್ಯಕ್ಷ ಬಸವರಾಜು ಸೇರಿದಂತೆ ತಾಲೂಕು ಘಟಕದ ಬಹುತೇಕ ಪದಾಧಿಕಾರಿಗಳು ರಾಜೀನಾಮೆ ನೀಡುತ್ತಿದ್ದೇವೆ ಎಂದರು.
ಸಭೆಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜು, ಪದಾಧಿಕಾರಿಗಳಾದ ಕುಮಾರಸ್ವಾಮಿ, ಶಿವರುದ್ರಚಾರ್, ಲಿಂಗರಾಜು, ಸ್ವಾಮಿ, ನಾಗೇಶ್, ರವೀಂದ್ರ, ಸೂರ್ಯಪ್ರಕಾಶ್, ಇತರರು ಇದ್ದರು.