ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ರೌಡಿ ವಿಕಾಸ್‌ ದುಬೆ ಎಸ್ಕೇಪ್‌!

ನವದೆಹಲಿ: ಉತ್ತರಪ್ರದೇಶದಲ್ಲಿ ಎಂಟು ಮಂದಿ ಪೊಲೀಸರ ಹತ್ಯೆಗೆ ಕಾರಣವಾಗಿರುವ ಆರೋಪ ಹೊತ್ತ ಕುಖ್ಯಾತ ರೌಡಿ ವಿಕಾಸ್ ದುಬೆ ಪೊಲೀಸರು ಬರುವ ಮುನ್ನವೇ ತಂಗಿದ್ದ ಹೋಟೆಲ್‌ನಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ ಎನ್ನಲಾಗಿದೆ. ಈತ ಫರಿದಾಬಾದ್ ಹೋಟೆಲ್‌ ಒಂದರಲ್ಲಿ ತಂಗಿದ್ದ ಮಾಹಿತಿ ಸಿಕ್ಕ ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಹೋಟೆಲ್‌ ಮೇಲೆ ದಾಳಿ ಮಾಡಿದ್ದರು. ಆದರೆ ಪೊಲೀಸರು ಬರುವ ಸುಳಿವು ಮೊದಲೇ ತಿಳಿದಿತ್ತೋ ಎನ್ನುವಂತೆ ದುಬೆ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ. ಗುಪ್ತಚರ ವರದಿಗಳ ಪ್ರಕಾರ, ವಿಕಾಸ್ ನಕಲಿ ಗುರುತಿನ ಚೀಟಿ ನೀಡಿ ಜನನಿಬಿಡ … Continue reading ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ರೌಡಿ ವಿಕಾಸ್‌ ದುಬೆ ಎಸ್ಕೇಪ್‌!